
ಬೆಂಗಳೂರು: ಟೆಸ್ಟ್ ಕ್ರಿಕೆಟ್ನಲ್ಲಿ ಪರ ಕ್ಯಾಪ್ಟನ್ ಹಾಗೂ ವೈಸ್ ಕ್ಯಾಪ್ಟನ್ ಕೆಎಲ್ ರಾಹುಲ್ ಮೊದಲ ಆಯ್ಕೆಯ ಓಪನರ್ಗಳಾಗಿದ್ದಾರೆ. ಆದರೆ, ರಾಹುಲ್ ಗಾಯದ ಸಮಸ್ಯೆ ಎದುರಿಸಿರುವ ಕಾರಣ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಜೊತೆಗೆ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಆಡುತ್ತಿದ್ದಾರೆ. ಓಪನರ್ ಆಗಿ ಮಯಾಂಕ್ ಅಗರ್ವಾಲ್, ಕೇವಲ ತಾಯ್ನಾಡಿನಲ್ಲಿ ಮಾತ್ರವೇ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆದರೆ, ವಿದೇಶಿ ಪಿಚ್ಗಳಲ್ಲಿ ಸಾಲು ಸಾಲು ವೈಫಲ್ಯ ಕಂಡಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಮೊದಲ ಆಯ್ಕೆಯ ಓಪನರ್ ಯಾರಾಗಬೇಕು ಎಂಬ ಬಗ್ಗೆ ಬಾರಿ ಚರ್ಚೆಯಾಗುತ್ತಿದೆ. ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಮಾತನಾಡಿದ್ದು, ಓಪನರ್ ಸ್ಥಾನಕ್ಕೆ ತಮ್ಮ ಆಯ್ಕೆಯನ್ನು ಮುಂದಿಟ್ಟಿದ್ದಾರೆ. ಓಪನರ್ ಸ್ಥಾನಕ್ಕೆ ಭಾರತ ತಂಡದಲ್ಲಿ ಭಾರಿ ಪೈಪೋಟಿಯಿದೆ. ಆದರೆ, ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಯುವ ಓಪನರ್ ನೀಡಿದ ಭರ್ಜರಿ ಪ್ರದರ್ಶನಕ್ಕೆ ಅನುಗುಣವಾಗಿ ಅವರಿಗೆ ರೋಹಿತ್ ಒಟ್ಟಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ಕೊಡಬೇಕು ಎಂದು ಗವಾಸ್ಕರ್ ಹೇಳಿದ್ದಾರೆ. "ಶುಭಮನ್ ಗಿಲ್ ಕಳೆದ ಎರಡು ತಿಂಗಳು ಯಾವುದೇ ಕ್ರಿಕೆಟ್ ಆಡಿಲ್ಲ. ಟೀಮ್ ಇಂಡಿಯಾ ಸೇವೆಯಲ್ಲಿ ಇರುವ ಕಾರಣ ಅವರು ರಣಜಿ ಟ್ರೋಫಿ ಟೂರ್ನಿಯಲ್ಲೂ ಆಡಿಲ್ಲ. ಅವರಿಗೆ ಯಾವುದೇ ರೀತಿಯ ಆಟ ಲಭ್ಯವಾಗುತ್ತಿಲ್ಲ. ಅವರಲ್ಲಿನ ಪ್ರತಿಭೆ ಅಪಾರ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಕೊನೆಗೆ ಆಟಗಾರ ಯಾವ ಲಯದಲ್ಲಿ ಇದ್ದಾನೆ ಎಂಬುದನ್ನು ಪರಿಗಣಿಸಿ ಅವಕಾಶ ಕೊಡಲಾಗುತ್ತದೆ. ನಿರಂತರವಾಗಿ ಆಡಿದರಷ್ಟೇ ಲಯದಲ್ಲಿ ಇರಲು ಸಾಧ್ಯ," ಎಂದು ಸ್ಪೋರ್ಟ್ಸ್ ತಕ್ ಕಾರ್ಯಕ್ರಮದಲ್ಲಿ ಗವಾಸ್ಕರ್ ಹೇಳಿದ್ದಾರೆ. ಭಾರತದಲ್ಲಿ ಮಯಾಂಕ್ ಬಾಸ್: ಗವಾಸ್ಕರ್ ಇದೇ ವೇಳೆ ಓಪನರ್ ಮಯಾಂಕ್ ಅಗರ್ವಾಲ್ ಸಾಮರ್ಥ್ಯವನ್ನೂ ಗವಾಸ್ಕರ್ ಗುಣಗಾನ ಮಾಡಿದ್ದಾರೆ. ಭಾರತದಲ್ಲಿ ನಡೆಯುವ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಮಯಾಂಕ್ 'ಬಾಸ್' ಮಾದರಿ ಬ್ಯಾಟ್ ಮಾಡುತ್ತಾರೆ ಎಂದಿದ್ದಾರೆ. "ಗಮನದಲ್ಲಿಟ್ಟು ನೋಡಿದರೆ ಭಾರತದಲ್ಲಿ ನಡೆಯುವ ಟೆಸ್ಟ್ ಸರಣಿಗಳಲ್ಲಿ ಮಯಾಂಕ್ ಅಗರ್ವಾಲ್ ದೊಡ್ಡ ಸ್ಕೋರ್ ಮಾಡಿದ್ದಾರೆ. ಭಾರತದಲ್ಲಿ ಅವರ ಆಟ 'ಬಾಸ್' ಮಾದರಿ. ಆದರೆ, ವಿದೇಶದಲ್ಲಿ ಸ್ಕೋರ್ ಮಾಡುತ್ತಿಲ್ಲ. ತಾಯ್ನಾಡಿನಲ್ಲಿ ನಡೆದ ಸರಣಿಯಲ್ಲಿ ಒಂದು ದೊಡ್ಡ ಶತಕ ಅಥವಾ ದ್ವಿಶತಕ ಬಾರಿಸುತ್ತಾರೆ. ಹೀಗಾಗಿ ತವರಿನಲ್ಲಿ ಅವರಿಗೆ ಆಡುವ ಅವಕಾಶ ಕೊಡಬೇಕು," ಎಂದು ಗವಾಸ್ಕರ್ ಹೇಳಿದ್ದಾರೆ. ಸರಣಿಯಲ್ಲಿ ಭಾರತಕ್ಕೆ ಮುನ್ನಡೆ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಎರಡನೇ ಆವೃತ್ತಿಯ ಭಾಗವಾಗಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡ 1-0 ಅಂತರದ ಮುನ್ನಡೆ ಗಳಿಸಿದೆ. ಮೊಹಾಲಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ರವೀಂದ್ರ ಜಡೇಜಾ (175* ರನ್, 9 ವಿಕೆಟ್) ಅವರ ಆಲ್ರೌಂಡ್ ಆಟದ ಬಲದಿಂದ ಇನಿಂಗ್ಸ್ ಮತ್ತು 222 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಸರಣಿಯ ಎರಡನೇ ಪಂದ್ಯ ಬೆಂಗಳೂರಿನಲ್ಲಿ ಮಾರ್ಚ್ 12ರಿಂದ 16ರವರೆಗೆ ನಡೆಯಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/Gd9wKbu