Disproportionate assets: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ಸಚಿವ ವಿ ಸೋಮಣ್ಣ ಪರ ಮಾತನಾಡಿದ ಜೆಡಿಎಸ್ನ ಎಚ್. ಡಿ ರೇವಣ್ಣ, ‘ಯಾರೋ ಅರ್ಜಿ ನೀಡಿದರು, ಯಾರೋ ನೋಟಿಸ್ ಪಡೆದರು ಎಂದು ರಾಜೀನಾಮೆ ಕೇಳುವುದು ಸರಿಯಲ್ಲ. ಗೌಡರ ಮೇಲೂ ಈ ಆರೋಪ ಇತ್ತು. ನಮ್ಮ ಮೇಲೂ ಇದೆ’ ಎಂದು ಹೇಳಿದರು. ಆಗ ಸಿದ್ದರಾಮಯ್ಯ, ‘ಸಚಿವ ಸೋಮಣ್ಣ ವಿರುದ್ಧ ನ್ಯಾಯಾಲಯವೇ ವಿಚಾರಣೆ ಆರಂಭಿಸಿದೆ. ರಾಜೀನಾಮೆ ಪಡೆಯಲು ಇದಕ್ಕಿಂತ ಏನು ಬೇಕು’ ಎಂದು ಪ್ರಶ್ನಿಸಿದರು.
from India & World News in Kannada | VK Polls https://ift.tt/bNdnFE5