ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಣಿಸಿದ್ದ ಅಡಕೆಯ ಹಿಂಗಾರ ಕರಟುವ ರೋಗಕ್ಕೆ ಕಾರಣವಾಗಿದ್ದ ಕೊಲೆಟೋಟ್ರೈಕಮ್ ಶಿಲೀಂದ್ರದ ರೂಪಾಂತರಿಯೇ ಎಲೆ ಚುಕ್ಕೆ ರೋಗಕ್ಕೆ ಕಾರಣ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ. ಎಲೆ ಚುಕ್ಕೆ ರೋಗಕಾರಕ ಶಿಲೀಂದ್ರಗಳು ಗಾಳಿಯಲ್ಲಿ ಶೀಘ್ರವಾಗಿ ಪಸರಿಸುತ್ತಿದ್ದು ಕಿ.ಮೀ. ಉದ್ದಕ್ಕೂ ರೋಗ ಹರಡುವಿಕೆಗೆ ಕಾರಣವಾಗುತ್ತಿದೆ. ಹಿಂಗಾರ ಒಣಗುವ ರೋಗದ ಜತೆಗೆ ಎಲೆ ಚುಕ್ಕೆ ರೋಗವೂ ಕಾಣಿಸಿರುವುದು ಅಡಕೆ ಬೆಳೆಗಾರರನ್ನು ಮತ್ತಷ್ಟು ಕಂಗೆಡಿಸಿದೆ.
from India & World News in Kannada | VK Polls https://ift.tt/zYEt8Lo