ರಣಜಿ ಆಡುತ್ತಿರುವ ಪೂಜಾರ, ರಹಾನೆಗೆ ಗುಡ್‌ ನ್ಯೂಸ್‌ ಕೊಟ್ಟ ರೋಹಿತ್‌!

ಮೊಹಾಲಿ: ಸತತ ವೈಫಲ್ಯ ಅನುಭವಿಸಿದ್ದ ಕಾರಣ ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡು ರಣಜಿ ಟ್ರೋಫಿ ಟೂರ್ನಿ ಆಡುತ್ತಿರುವ ಹಿರಿಯ ಬ್ಯಾಟ್ಸ್‌ಮನ್‌ಗಳಾದ ಹಾಗೂ ಅವರಿಗೆ ನೂತನ ನಾಯಕ ಸಿಹಿ ಸುದ್ದಿ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಟೀಮ್‌ ಇಂಡಿಯಾದಲ್ಲಿ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾಗಿದ್ದ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರನ್ನು ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಕೈ ಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರೂ ತಮ್ಮ ತವರು ರಾಜ್ಯಗಳ ಪರ ಸದ್ಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಮೊದಲನೇ ಟೆಸ್ಟ್‌ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುವ ವೇಳೆ ನಾಯಕ ರೋಹಿತ್‌ ಶರ್ಮಾಗೆ ಸುದ್ದಿಗಾರರೊಬ್ಬರು ಈ ಇಬ್ಬರೂ ಹಿರಿಯ ಆಟಗಾರರ ಸ್ಥಾನವನ್ನು ಯಾರು ತುಂಬಲಿದ್ದಾರೆಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಲು ಸ್ವಲ್ಪ ಸಮಯಾಕಾವಶ ತೆಗೆದುಕೊಂಡ ರೋಹಿತ್‌, ಯಾರು ಬೇಕಾದರೂ ಅವರ ಸ್ಥಾನವನ್ನು ತುಂಬಬಹುದು ಎಂದು ಹೇಳಿದರು "ಪೂಜಾರ ಹಾಗೂ ರಹಾನೆ ಅವರ ಸ್ಥಾನವನ್ನು ತುಂಬಬೇಕೆಂದರೆ ಅವರು ತುಂಬಾ ದೊಡ್ಡ ಆಟಗಾರರಾಗಿರಬೇಕು. ಅಂದಹಾಗೆ ಈ ಇಬ್ಬರು ಸ್ಥಾನವನ್ನು ತುಂಬುವುದು ಹೇಳಿಕೊಳ್ಳುವಷ್ಟು ಸುಲಭವಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಪೂಜಾರ ಹಾಗೂ ರಹಾನೆ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆಂದು ನನಗೆ ಗೊತ್ತಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಪಂದ್ಯದ ಆರಂಭದವರೆಗೂ ಕಾಯಬೇಕಾಗುತ್ತದೆ," ಎಂದರು ತಿಳಿಸಿದರು. "ಭಾರತ ತಂಡಕ್ಕೆ ಪೂಜಾರ ಹಾಗೂ ರಹಾನೆ ನೀಡಿರುವ ಕೊಡುಗೆ ದೊಡ್ಡದು. ಹಾಗಾಗಿ ಅವರನ್ನು ಹೊರಗುಳಿಯುವಂತೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಈ ಇಬ್ಬರೂ ತಲಾ 80 ರಿಂದ 90 ಟೆಸ್ಟ್‌ ಪಂದ್ಯಗಳಾಡಿದ್ದು, ಇದಕ್ಕಾಗಿ ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಭಾರತದ ವಿದೇಶಿ ಟೆಸ್ಟ್‌ ಸರಣಿ ಜಯ ಹಾಗೂ ಟೆಸ್ಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆಯಬೇಕೆಂದರೆ ಈ ಇಬ್ಬರ ಕೊಡುಗೆ ಅತ್ಯಮೂಲ್ಯವಾಗಿದೆ," ಎಂದರು. "ಭವಿಷ್ಯದಲ್ಲಿ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರನ್ನು ನೋಡದೆ ಇರಲು ಸಾಧ್ಯವೇ ಇಲ್ಲ. ಖಚಿತವಾಗಿಯೂ ಈ ಇಬ್ಬರೂ ನಮ್ಮ ಯೋಜನೆಯಲ್ಲಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಗೆ ಅವರನ್ನು ತಂಡಕ್ಕೆ ಪರಿಗಣಿಸಿಲ್ಲವಷ್ಟೆ. ಮುಂದಿನ ಸರಣಿಗಳಿಗೆ ಅವರನ್ನು ತಂಡದಲ್ಲಿ ಪರಿಗಣಿಸುತ್ತೇವೆ ಅಥವಾ ಇಲ್ಲ ಎಂಬುದರ ಬಗ್ಗೆ ನಾವು ಗ್ಯಾರೆಂಟಿ ಕೊಡಲು ಸಾಧ್ಯವಿಲ್ಲ," ಎಂದು ತಿಳಿಸಿದರು. ಶುಭಮನ್‌ ಗಿಲ್‌, ಹನುಮ ವಿಹಾರಿ ಹಾಗೂ ಶ್ರೇಯಸ್‌ ಅಯ್ಯರ್‌ ಅವರಲ್ಲಿ ಇಬ್ಬರು ಆಟಗಾರರು ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಸ್ಥಾನವನ್ನು ತುಂಬಬಹುದು. ಮಯಾಂಕ್‌ ಅಗರ್ವಾಲ್‌ ಅವರ ಜೊತೆಗೆ ಶುಭಮನ್‌ ಗಿಲ್‌ ಕೂಡ ರೋಹಿತ್‌ ಶರ್ಮಾಗೆ ಆರಂಭಿಕ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್‌ ಶರ್ಮಾ, "ನಾನು ತಂಡದ ನಾಯಕನಾಗಿದ್ದೇನೆ ಹಾಗೂ ಪ್ರತಿಯೊಬ್ಬರನ್ನು ಆಡಿಸುವ ಭಾವನೆಯನ್ನು ಹೊಂದಿದ್ದೇನೆ. ಹಾಗಾಗಿ ಈ ರೀತಿಯ ಆಧ್ಯತೆಯನ್ನು ನಾನು ಯಾರಿಗೂ ನೀಡುವುದಿಲ್ಲ. ಪಂದ್ಯ ಆರಂಭಕ್ಕೂ ಮುನ್ನ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಪ್ರತಿಯೊಂದು ಸಂಗತಿಯ ಬಗ್ಗೆಯೂ ವಿಶ್ಲೇಷಣೆ ನಡೆಸಿ ಸೂಕ್ತ ಕರೆಯನ್ನು ತೆಗೆದುಕೊಳ್ಳುತ್ತೇವೆ," ಎಂದು ತಿಳಿಸಿದರು. "ಮಯಾಂಕ್‌, ಶುಭಮನ್‌, ವಿಹಾರಿ, ಅಯ್ಯರ್‌. ಈ ಇಲ್ಲಾ ಆಟಗಾರರು ಅದ್ಭುತವಾಗಿದ್ದಾರೆ. ಇವರು ಭಾರತೀಯ ಕ್ರಿಕೆಟ್‌ನ ಭವಿಷ್ಯದ ಆಟಗಾರರು. ಟೆಸ್ಟ್‌ ಸ್ವರೂಪದಲ್ಲಿ ಅವರು ತಂಡಕ್ಕೆ ಅತ್ಯುತ್ತಮವಾದ ಕೊಡುಗೆಯನ್ನು ನೀಡಿದ್ದಾರೆ. ಇದು ನಮಗೆ ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ಬೆಂಬಲ ತುಂಬಾ ಅಗತ್ಯ," ಎಂದು ರೋಹಿತ್‌ ಶರ್ಮಾ ಪ್ರತಿಪಾಧಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4BgURv8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...