ಹಿಜಾಬ್‌-ಕೇಸರಿ ಗಲಾಟೆಗೆ ಸರಕಾರ ಬೆಂಬಲ ನೀಡುತ್ತಿದೆ; ಪ್ರಿಯಾಂಕ್ ಖರ್ಗೆ ಆಕ್ರೋಶ

ಚಿತ್ತಾಪುರ: ದೇಶದಲ್ಲಿ ಧರ್ಮಗಳ ನಡುವೆ ಭ್ರಾತೃತ್ವತೆ ಬಲಿಷ್ಠವಾಗಿದೆ. ಎಲ್ಲರೂ ಒಂದೇ ಎನ್ನುವ ಸಂವಿಧಾನದ ಆಶಯದಂತೆ ನಡೆದಿದೆ. ಆದರೂ ಈ ನಡುವೆ ಹಿಜಾಬ್‌-ಕೇಸರಿ ಗಲಾಟೆಗೆ ಸರಕಾರ ಬೆಂಬಲ ನೀಡುತ್ತಿದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು. ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಶನಿವಾರ ನಡೆದ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಡಾ.ಬಾಬು ಜಗಜೀವನರಾಮ್‌ ಭವನ, 40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸರಕಾರಿ ಶಾಲಾ ಕೊಠಡಿ, 84 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಉರ್ದು ಮಾಧ್ಯಮ ಶಾಲೆಯ ಕೊಠಡಿಗಳ ಉದ್ಘಾಟನೆ ಹಾಗೂ 66.70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಮಕ್ಕಳ ಕೈಗೆ ಕೇಸರಿ ಶಾಲು ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಉರ್ದು ಮಾಧ್ಯಮದ ಶಾಲೆ ಉದ್ಘಾಟನೆ ಹಿಂದೂ ಸಂಪ್ರದಾಯದಂತೆ ನಡೆದಿದೆ. ಇದು ನಮ್ಮೊಳಗೆ ಭ್ರಾತೃತ್ವತೆ ಹಾಗೂ ಸಹೋದರತೆ ಇನ್ನೂ ಬಲಿಷ್ಠವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಧರ್ಮದ ಆಚರಣೆಗಳು ಆಯಾ ವ್ಯಕ್ತಿಗಳ ನಡುವೆ ನಡೆಯುವ ವೈಯಕ್ತಿಕ ವಿಷಯ. ನಾನು ನಾಸ್ತಿಕ. ನನಗೆ ದೇವರು, ಪೂಜೆ ಇತ್ಯಾದಿ ಬಗ್ಗೆ ಒಲವಿಲ್ಲ. ನನಗೆ ಬಸವಣ್ಣನವರ ತತ್ವದ ಮೇಲೆ ನಂಬಿಕೆ ಇದೆ. ನಾನು ಸಂವಿಧಾನ ಗೌರವಿಸುತ್ತೇನೆ. ಆದರೆ ಯಾವುದೇ ಧಾರ್ಮಿಕ ಆಚರಣೆ ಮಾಡುವವರಿಗೆ ನನ್ನ ವಿರೋಧವಿಲ್ಲ ಎಂದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ್‌, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ್‌, ಗ್ರಾಮ ಪಂಚಾಯತಿ ಅಧ್ಯಕ್ಷ ರೀಹಾನಾಬೇಗಂ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರ್‌, ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣಿ, ಮುಕ್ತಾರ ಪಟೇಲ್‌, ಸಿದ್ದಣ್ಣಗೌಡ ಪಾಟೀಲ, ಶ್ರೆತ್ರೖಶೈಲ್‌ ಪಾಟೀಲ ದೇವು ಯಾಬಾಳ, ಶ್ರೀಮಂತ ಗುತ್ತೇದಾರ, ದೇವಿಂದ್ರ ಅಣಿಕೇರಿ, ಜಗನ್ನಾಥ ಫೀದಾ, ಶರಣು ಸಜ್ಜನಶೆಟ್ಟಿ, ಹರಳಯ್ಯ ಬಡಿಗೇರ್‌, ಶನ್ನವೀರ ಕಣಗಿ, ಶರಣು ಕೋರೆ, ಹಾಜಿಮೀಯ್ಯಾ ದಂಡೋತಿ, ಸುಕ್ರುಮಿಯ್ಯಾ ಇತರರು ಇದ್ದರು. ಮಲ್ಲಶೆಟ್ಟಪ್ಪ ಸಂಗಾವಿ ನಿರೂಪಿಸಿದರು.


from India & World News in Kannada | VK Polls https://ift.tt/wJjznvT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...