ಪ್ರವಾಸ ಮರು ನಿಗದಿಮಾಡಿ: ಚೀನಾ ವಿದೇಶಾಂಗ ಸಚಿವರಿಗೆ ಭಾರತ ಸೂಚನೆ

ಹೊಸದಿಲ್ಲಿ: ಗಡಿ ವಿಚಾರಗಳ ಮಾತುಕತೆಗಾಗಿ ಸೆಪ್ಟೆಂಬರ್ 9ರಂದು ಭಾರತಕ್ಕೆ ಭೇಟಿ ನೀಡಬೇಕಿದ್ದ ಅವರ ಪ್ರವಾಸವನ್ನು ಮರುನಿಗದಿಪಡಿಸಿವಂತೆ ಭಾರತ ಸೂಚಿಸಿದೆ. ಚೀನಾ ವಿದೇಶಾಂಗ ಸಚಿವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಜತೆ ಚರ್ಚಿಸಲು ಭಾರತಕ್ಕೆ ಭೇಟಿ ನೀಡಬೇಕಿತ್ತು. ಈ ಬಗ್ಗೆ ಅಧಿಕೃತ ಹೇಳಿಕೆ ಬಿದ್ದಿಲ್ಲವಾದರೂ, ಭಾರತ ಸರಕಾರವೇ ದಿನಾಂಕ ಬದಲಾವನೆಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಮಾತುಕತೆ ಮುಂದೂಡಿಕೆಗೆ ಅಧಿಕೃತ ಕಾರಣವೇನೆಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಗಡಿ ವಿಚಾರಗಳ ಮಾತುಕತೆಗಾಗಿ ವಿಶೇಷ ಪ್ರತಿನಿಧಿಯಾಗಿ ವಾಂಗ್‌ ಆಗಮಿಸಬೇಕಿತ್ತು. ಆಗಸ್ಟ್ ಮಧ್ಯಭಾಗದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್‌ 370ನೇ ವಿಧಿ ರದ್ದತಿ ಕುರಿತು ವಿವರಿಸಲು ಬೀಜಿಂಗ್‌ಗೆ ತೆರಳಿದ್ದ ಸಂದರ್ಭ ವಾಂಗ್ ಭೇಟಿ ನಿಗದಿಯಾಗಿತ್ತು. ಅಷ್ಟಾಗಿಯೂ ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ಕುರಿತು ವಿಶೇಷ ಅನೌಪಚಾರಿಕ ಚರ್ಚೆ ನಡೆಸಬೇಕೆಂದು ಕರೆ ನೀಡಿತ್ತು. ಚೀನಾದ ತಂತ್ರದಂತೆ ಎಲ್ಲವೂ ನಡೆದಿದ್ದರೆ ಕಾಶ್ಮೀರ ಕುರಿತು ಪೂರ್ಣ ಪ್ರಮಾಣದ ಔಪಚಾರಿಕ ಸಭೆಯೇ ನಡೆಯುತ್ತಿತ್ತು. ಆದರೆ ಭಾರತದ ರಾಜತಾಂತ್ರಿಕ ಪಟ್ಟುಗಳಿಂದಾಗಿ ಸಭೆ ಅನೌಪಚಾರಿಕ ಹಂತಕ್ಕೆ ಸ್ಥಗಿತಗೊಂಡು, ಭದ್ರತಾ ಮಂಡಳಿ ಅಧಿಕೃತ ಹೇಳಿಕೆಯನ್ನೂ ಬಿಡುಗಡೆ ಮಾಡದೆ ಸಭೆ ಬರ್ಖಾಸ್ತುಗೊಂಡಿತ್ತು. ಒಂದು ವೇಳೆ ಹೇಳಿಕೆ ಬಿಡುಗಡೆ ಮಾಡಲು ಅವಕಾಶ ದೊರೆತಿದ್ದರೆ ಚೀನಾದ ಪ್ರತಿನಿಧಿ ಝಂಗ್‌ ಯುನ್‌ ತನ್ನದೇ ಹೇಳಿಕೆಯನ್ನು ಓದಿ ಹೇಳುತ್ತಿದ್ದರು. ಸದ್ಯ ಚೀನಾದ ವಿದೇಶಾಂಗ ಸಚಿವ ವಾಂಗ್‌ ಉತ್ತರ ಕೊರಿಯಾಗೆ ಭೇಟಿ ನೀಡಿದ್ದು, ಶನಿವಾರ ಇಸ್ಲಾಮಾಬಾದ್‌ಗೆ ತೆರಳಲಿದ್ದಾರೆ. ಶಾಂತಿ ಪ್ರಕ್ರಿಯೆಗಳ ಬಗ್ಗೆ ಚೀನಾ, ಪಾಕಿಸ್ತಾನ ಮತ್ತು ಅಫಘಾನಿಸ್ತಾನ ತ್ರಿಪಕ್ಷೀಯ ಮಾತುಕತೆ ನಡೆಸಲಿವೆ. ಆ ಬಳಿಕ ಸೋಮವಾರ ಭಾರತಕ್ಕೆ ಆಗಮಿಸುವಂತೆ ಪ್ರವಾಸ ನಿಗದಿಯಾಗಿತ್ತು. ಗಡಿ ವಿವಾದ ಪರಿಹರಿಸುವಲ್ಲಿ 'ಆರಂಭಿಕ ಲಾಭದ ಪ್ರಸ್ತಾವಗಳನ್ನು' ಬೀಜಿಂಗ್ ಭಾರತದ ಮುಂದಿಟ್ಟಿತ್ತು ಎಂದು ಅಧಿಕೃತ ಮೂಲಗಳು ಹೇಳಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆ 2ನೇ ಅನೌಪಚಾರಿಕ ಶೃಂಗಸಭೆಗಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಕ್ಟೋಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. 'ನೆರೆಹೊರೆಯ ದೇಶಗಳು ಮತ್ತು ಬೃಹತ್‌ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳನ್ನು ತಪ್ಪಿಸುವುದು ಬಹಳ ಕಷ್ಟ. ಆದರೆ ಅವುಗಳ ನಿರ್ವಹಣೆಯೇ ಮುಖ್ಯ ಅಷ್ಟೆ. ವಿವೇಕಪೂರ್ಣ ನಡವಳಿಕೆಗಳಿಂದ, ವಿಶಾಲ ದೃಷ್ಟಿಕೋನದಿಂದ ನೋಡುತ್ತ ಮಾತುಕತೆ ಮೂಲಕ ಭಿನ್ನಾಭಿಪ್ರಾಯದ ತೀವ್ರತೆಗಳನ್ನು ತಗ್ಗಿಸಿಕೊಳ್ಳಬೇಕಷ್ಟೆ. ಮಾತುಕತೆ ಮೂಲಕವೇ ವಿವಾದ ಬಗೆಹರಿಸಿಕೊಂಡು ಶಾಂತಿ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಬೇಕಿದೆ. ಪರಸ್ಪರ ಸಹಕಾರ ವೃದ್ಧಿಸಿಕೊಳ್ಳಬೇಕಿದೆ' ಎಂದು ಚೀನಾದ ನೂತನ ರಾಯಭಾರಿ ಹೇಳಿದ್ದಾರೆ.


from India & World News in Kannada | VK Polls https://ift.tt/2Lteo1q

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...