ಕರಾಚಿ: ಬರೋಬ್ಬರಿ ಹತ್ತು ವರ್ಷಗಳ ಬಳಿಕ ಪಾಕಿಸ್ತಾನದ ನೆಲದಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ವೇದಿಕೆ ನಿರ್ಮಾಣವಾಗಿದೆ. ಮತ್ತು ಪ್ರವಾಸಿ ಶ್ರೀಲಂಕಾ ತಂಡಗಳ ನಡುವೆ ಶುಕ್ರವಾರ ಕರಾಚಿಯ ನ್ಯಾಷನಲ್ ಸ್ಟೇಡಿಯಮ್ನಲ್ಲಿಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. 2009ರಲ್ಲಿ ಪ್ರವಾಸಿ ಶ್ರೀಲಂಕಾ ತಂಡದ ಬಸ್ಸಿನ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕಿಸ್ತಾನದಲ್ಲಿಆಡಲು ಜಗತ್ತಿನ ಇತರ ತಂಡಗಳು ನಿರಾಕರಿಸಿದ್ದವು. ಹೀಗಾಗಿ ನಂತರದ ದಿನಗಳಲ್ಲಿಪಾಕಿಸ್ತಾನದ ಪಂದ್ಯಗಳಿಗೆ ಯುಎಇ ಆತಿಥ್ಯ ವಹಿಸುತ್ತಿತ್ತು. ಸುಮಾರು ಏಳು ವರ್ಷಗಳ ಬಳಿಕ ಅಂದರೆ 2015ರಲ್ಲಿಜಿಂಬಾಬ್ವೆ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡಿ ಟಿ20 ಪಂದ್ಯಗಳನ್ನು ಆಡಿತ್ತು. 2017ರಲ್ಲಿಶ್ರೀಲಂಕಾ ವಿರುದ್ಧವೂ ಟಿ20 ಪಂದ್ಯ ನಡೆದಿತ್ತು. ಆದರೆ, ಏಕದಿನ ಪಂದ್ಯಗಳು ನಡೆದಿರಲಿಲ್ಲ. ಕ್ರಿಕೆಟ್ ಅಭಿಮಾನಿಗಳ ಸಂಖ್ಯೆ ಹೆಚ್ಚಿರುವ ಪಾಕಿಸ್ತಾನಕ್ಕೆ ವಿದೇಶಿ ತಂಡವೊಂದನ್ನು ಕರೆಸಿ ಏಕದಿನ ಪಂದ್ಯ ಆಡಿಸಬೇಕು ಎಂಬುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಪಿಸಿಬಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜತೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಂಡಿತ್ತು. ಆದರೆ, ಶ್ರೀಲಂಕಾದ 10 ಆಟಗಾರರು ಪಾಕ್ಗೆ ಹೋಗಲು ನಿರಾಕರಿಸಿದ್ದರು. ಕೊನೆಗೂ, ಅವರಿಗೆ ಭದ್ರತೆಯ ಭರವಸೆ ನೀಡಿ ಪಾಕ್ಗೆ ಕಳುಹಿಸಲಾಗಿದೆ. ಇದೀಗ ಸುಮಾರು 2000 ಭದ್ರತಾ ಸಿಬ್ಬಂದಿ ಶ್ರೀಲಂಕಾ ಕ್ರಿಕೆಟಿಗರಿಗೆ ರಕ್ಷಣೆ ನೀಡುತ್ತಿದ್ದಾರೆ. ಸೆಪ್ಟೆಂಬರ್ 27, 29 ಹಾಗೂ ಅಕ್ಟೋಬರ್ 2ರಂದು 3 ಏಕದಿನ ಪಂದ್ಯಗಳು ಹಾಗೂ ಅಕ್ಟೋಬರ್ 5, 7 ಹಾಗೂ 9ರಂದು 3 ಟಿ20 ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿ ಇಂತಿದೆ: ಏಕದಿನ ಸರಣಿ: ಮೊದಲ ಏಕದಿನ: ಸೆ.27, ಶುಕ್ರವಾರ, ಕರಾಚಿ ದ್ವಿತೀಯ ಏಕದಿನ: ಸೆ.29, ಭಾನುವಾರ, ಕರಾಚಿ ಅಂತಿಮ ಏಕದಿನ: ಅ.3, ಗುರುವಾರ, ಕರಾಚಿ ಟ್ವೆಂಟಿ-20 ಸರಣಿ: ಮೊದಲ ಟಿ20: ಅ.5, ಶನಿವಾರ, ಲಾಹೋರ್ ದ್ವಿತೀಯ ಟಿ20: ಅ.7, ಸೋಮವಾರ, ಲಾಹೋರ್ ಅಂತಿಮ ಟಿ20: ಅ.9, ಬುಧವಾರ, ಲಾಹೋರ್ ಏಕದಿನ ಹಾಗೂ ಟ್ವೆಂಟಿ-20 ತಂಡಗಳ ನಾಯಕರಾದ ದಿಮುತ್ ಕರುಣಾರತ್ನೆ ಹಾಗೂ ಲಸಿತ್ ಮಾಲಿಂಗ ಅನುಪಸ್ಥಿತಿಯಲ್ಲಿ ಸಿಂಹಳೀಯರ ತಂಡವನ್ನು ಅನುಕ್ರಮವಾಗಿ ಲಹಿರು ತಿರಿಮಣ್ಣೆ ಹಾಗೂ ದಸುನ್ ಶನಕ ಮುನ್ನಡೆಸಲಿದ್ದಾರೆ. ಶ್ರೀಲಂಕಾದ ಟ್ವೆಂಟಿ-20 ನಾಯಕ ಲಸಿತ್ ಮಾಲಿಂಗ, ಏಕದಿನ ನಾಯಕ ದಿಮುತ್ ಕರುಣಾರತ್ನೆ, ತಿಸಾರಾ ಪರೇರಾ, ಏಂಜಲೋ ಮ್ಯಾಥ್ಯೂಸ್, ನಿರೋಶನ್ ಡಿಕ್ವೆಲ್ಲ, ಕುಸಾಸ್ ಪರೇರಾ, ಧನಂಜಯ ಡಿ ಸಿಲ್ವ, ಅಕಿಲ ಧನಂಜಯ, ಸುರಂಗ ಲಕ್ಮಲ್ ಹಾಗೂ ದಿನೇಶ್ ಚಾಂದಿಮಾಲ್ ಪಾಕಿಸ್ತಾನಕ್ಕೆ ತೆರಳಲು ವಿಸಮ್ಮತಿಯನ್ನು ನಿರಾಕರಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2n2BsM8