ನಾಳೆಯೂ ಅಂತಿಮ ನಿರ್ಣಯ ಬಾರದೆ ಸೋಮವಾರಕ್ಕೆ ಮುಂದೂಡಿಕೆಯಾದರೆ ಅನರ್ಹರಿಗೆ ಟ್ರಬಲ್‌ ಖಚಿತ

ಹೊಸದಿಲ್ಲಿ/ಬೆಂಗಳೂರು: ಸುಪ್ರೀಂಕೋರ್ಟ್‌ನಲ್ಲಿಬಿರುಸಿನ ವಾದ-ವಿವಾದ ಮುಂದುವರಿದಿರುವಂತೆಯೇ, ಅನರ್ಹ ಶಾಸಕರಿಗೆ ನಾಮಪತ್ರ ಸವಾಲ್‌ ಎದುರಾಗಿದೆ. ಚುನಾವಣೆ ಮುಂದೂಡಬೇಕು ಅಥವಾ ಸ್ಪರ್ಧೆಗೆ ಅವಕಾಶ ಕೊಡಬೇಕು ಎಂಬ ಅನರ್ಹ ಶಾಸಕರ ಕೋರಿಕೆ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಗುರುವಾರಕ್ಕೆ ಮುಂದೂಡಿದೆ. ಶುಕ್ರವಾರವೂ ಅಂತಿಮ ನಿರ್ಣಯ ಬರದೆ ಅಂತಿಮ ಆದೇಶ ಸೋಮವಾರಕ್ಕೆ ಮುಂದೂಡಿಕೆಯಾದರೆ ಅನರ್ಹರಿಗೆ ಟ್ರಬಲ್‌ ಖಚಿತ! ಸುಪ್ರೀಂಕೋರ್ಟ್‌ ಗುರುವಾರ ತಮಗೆ ಮಧ್ಯಂತರ ಪರಿಹಾರ ಕೊಡಲಿದೆ. ಭಾನುವಾರ ಬೆಂಗಳೂರಿನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ತೆರಳಿ ಪಕ್ಷದ ಸದಸ್ಯತ್ವ ಪಡೆದು ಬಿ ಫಾರಂ ಸ್ವೀಕರಿಸುತ್ತೇವೆ. ಸೋಮವಾರ ಬೆಳಗ್ಗೆ ನಾಮಪತ್ರ ಸಲ್ಲಿಸುತ್ತೇವೆ ಎನ್ನುವುದು ಅನರ್ಹ ಶಾಸಕರ ಸದ್ಯದ ಲೆಕ್ಕಾಚಾರ. ಆದರೆ ಶನಿವಾರ, ಭಾನುವಾರ ಕೋರ್ಟ್‌ಗೆ ರಜೆ. ಹಾಗಾಗಿ ಅಂತಿಮ ಆದೇಶವನ್ನು ನ್ಯಾಯಾಲಯ ಸೋಮವಾರಕ್ಕೆ ಕಾದಿರಿಸಿದರೆ ಬಂಡಾಯ ಶಾಸಕರಿಗೆ ಟೆನ್ಶನ್‌ ಏರಲಿದೆ. ಸೋಮವಾರ ಮಧ್ಯಾಹ್ನ 3 ಗಂಟೆಯೊಳಗೆ ಬಿ ಫಾರಂ ಸಹಿತ ನಾಮಪತ್ರ ಸಲ್ಲಿಸಬೇಕಾಗುತ್ತದೆ. ಹಾಗಾಗಿ ಬಿಜೆಪಿ ಮತ್ತು ಅದನ್ನು ನಂಬಿಕೊಂಡು ಬಂದಿರುವ ಪಕ್ಷಾಂತರಿಗಳಿಗೆ ಕೊನೆಯ ಕ್ಷಣದಲ್ಲಿಒತ್ತಡ ಎದುರಾಗಲಿದೆ. ಪಕ್ಷದ ಅಭ್ಯರ್ಥಿಗಳೇ ಕಣದಲ್ಲಿಇಲ್ಲದಿರುವ ಆತಂಕವೂ ಎದುರಾಗಬಹುದು. ಪಕ್ಷದ ಮೂಲ ಕಾರ್ಯಕರ್ತರ ವಿರೋಧ ಮತ್ತು ಪ್ರತಿಭಟನೆಯ ಬಿಸಿಯ ನಡುವೆಯೇ, ಯಾರನ್ನು ಕಣಕ್ಕಿಳಿಸಬೇಕು ಎಂಬ ಗೊಂದಲ ಉಂಟಾಗಬಹುದು. ಅನರ್ಹರಿಗೆ ಸರಾಗ ಯಾವಾಗ?
  • ಗುರುವಾರ ಅಥವಾ ಶುಕ್ರವಾರ ಸುಪ್ರೀಂನಿಂದ ಮಧ್ಯಂತರ ಪರಿಹಾರ
  • ಸ್ಪೀಕರ್‌ ಆದೇಶಕ್ಕೆ ತಡೆ, ಸ್ಪರ್ಧೆಗೆ ಅವಕಾಶ
  • ಸ್ಪೀಕರ್‌ ಆದೇಶ ವಿಚಾರಣೆ ಮುಂದಕ್ಕೆ, ಸ್ಪರ್ಧೆಗೆ ಮಾತ್ರ ಅವಕಾಶ
  • ಬಿಜೆಪಿಯ ಸದಸ್ಯತ್ವ ಪಡೆದು ನಾಮಪತ್ರ ಸಲ್ಲಿಕೆ
  • ಈಗಿನ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿ ಎಂದು ಚುನಾವಣೆ ಮುಂದೂಡಿಕೆ
ಅನರ್ಹರಿಗೆ ಟೆನ್ಶನ್‌ ಯಾವಾಗ?
  • ಅಂತಿಮ ಆದೇಶ ಸೋಮವಾರಕ್ಕೆ ಮುಂದೂಡಿಕೆ
  • ಸೋಮವಾರ ಅಂತಿಮ ದಿನವಾದ್ದರಿಂದ ತಾವು ನಾಮಪತ್ರ ಸಲ್ಲಿಸಬೇಕೋ, ಕುಟುಂಬದವರನ್ನು ಕಣಕ್ಕಿಳಿಸಬೇಕೋ ಎಂಬ ಗೊಂದಲ
  • ಅನರ್ಹಗೊಳಿಸಿದ್ದ ಸ್ಪೀಕರ್‌ ಕ್ರಮ ಸರಿ ಎಂಬ ತೀರ್ಪು
  • ಮಧ್ಯಂತರ ಪರಿಹಾರ ನಿರಾಕರಿಸಿ ವಿಚಾರಣೆ ಮುಂದೂಡಿಕೆ


from India & World News in Kannada | VK Polls https://ift.tt/2ldNku9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...