ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್‌ಗೂ ಯಾಚಿಸುವ ಪರಿಸ್ಥಿತಿ ಬಂದಿದ್ದೇಕೆ?

ಮುಂಬಯಿ: ಭಾರತೀಯ ಕ್ರಿಕೆಟ್‌ನ 'ದೇವರು' ಎಂದೇ ಖ್ಯಾತಿ ಪಡೆದಿರುವ ಮಾಜಿ ಬ್ಯಾಟಿಂಗ್ ದಿಗ್ಗಜ ಅನೇಕ ದಾಖಲೆಗಳನ್ನು ಬರೆದಿದ್ದಾರೆ. 1989ನೇ ಇಸವಿಯಲ್ಲಿ ಡೆಬ್ಯು ಮಾಡಿರುವ ಸಚಿನ್, ತಮ್ಮ ಕೆರಿಯರ್ ಆರಂಭಿಕ ಕಾಲಘಟ್ಟದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಯುತ್ತಿದ್ದರು. ಬಳಿಕ 1994ರಲ್ಲಿ ಆರಂಭಿಕನಾಗಿ ಬಡ್ತಿ ಪಡೆದಿದ್ದರು. ಈ ಬಗ್ಗೆ ಕುತೂಹಲದಾಯಕ ವಿಷಯವೊಂದನ್ನು ಹಂಚಿದ್ದಾರೆ. ಆರಂಭಿಕನಾಗಿ ಕ್ರೀಸಿಗಿಳಿದ ಬಳಿಕ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಕೆರಿಯರ್‌ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದರು. ಇದೇ ಕಾರಣಕ್ಕಾಗಿ 'ಸಿಡಿಲಮರಿ' ಎಂಬ ಪ್ರಖ್ಯಾತಿಗೆ ಪಾತ್ರವಾದರು. ತಮ್ಮ ಆಕ್ರಮಣಕಾರಿ ಆಟದ ಮೂಲಕ ಸಚಿನ್ ವಿಶ್ವ ಕ್ರಿಕೆಟನ್ನು ಗೆದ್ದಿದ್ದರು. ಸ್ವತ: ಸಚಿನ್ ಅವರೇ 1994ರ ಘಟನೆ ಬಗ್ಗೆ ಲಿಂಕ್ಡ್‌ಇನ್ ವೀಡಿಯೋದಲ್ಲಿ ಮೆಲುಕು ಹಾಕಿದ್ದಾರೆ. 'ಓಪನರ್ ಆಗಿ ಅವಕಾಶ ನೀಡಲು ನಾನು ಯಾಚಿಸಬೇಕಾಯಿತು. ಹಾಗೊಂದು ವೇಳೆ ಫೇಲ್ ಆಗಿದ್ದರೆ ಇನ್ನೆಂದು ಅವಕಾಶ ಸಿಗುತ್ತಿರಲಿಲ್ಲ' ಎಂದಿದ್ದಾರೆ. '1994ರಲ್ಲಿ ನಾನು ಭಾರತಕ್ಕಾಗಿ ಆಡಲು ಆರಂಭಿಸಿದಾಗ ವಿಕೆಟ್ ಉಳಿಸಿಕೊಳ್ಳುವುದು ಪ್ರತಿ ತಂಡದ ಯೋಜನೆಯಾಗಿತ್ತು. ಆದರೆ ನಾನು ಸ್ವಲ್ಪ ವಿಭಿನ್ನವಾಗಿ ಯೋಚಿಸಿದೆ. ನಾನು ಆರಂಭದಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ಆಕ್ರಮಣಕಾರಿಯಾಗಿ ಆಡಲು ಯೋಚಿಸಿದೆ' ಎಂದು ವಿವರಿಸಿದರು. ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆರಂಭಿಕನಾದ ಮೊದಲ ಪಂದ್ಯದಲ್ಲೇ 49 ಎಸೆತಗಳಲ್ಲಿ 82 ರನ್ ಗಳಿಸಿದೆ. ಹಾಗಾಗಿ ಮಗದೊಂದು ಅವಕಾಶಕ್ಕಾಗಿ ಮತ್ತೆ ಯಾಚಿಸುವ ಪರಿಸ್ಥಿತಿ ಎದುರಾಗಿರಲಿಲ್ಲ. ಅಲ್ಲಿಂದ ಬಳಿಕ ನನಗೆ ಅವಕಾಶ ನೀಡಲು ಮುಂದಾಗಿದ್ದರು ಎಂದು ಸೇರಿಸಿದರು. ಇಲ್ಲಿ ಸಚಿನ್ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಎಂದಿಗೂ ವೈಫಲ್ಯಗಳಿಗೆ ಭಯಪಡಬಾರದು ಎಂದು ಹೇಳಿದರು. ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕಪ್ತಾನಗಿರಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಬಾರಿಗೆ ಅಜಯ್ ಜಡೇಜಾ ಜತೆ ಓಪನರ್ ಆಗಿ ಬ್ಯಾಟಿಂಗ್‌ಗಿಳಿದಿದ್ದರು. ತದಾ ಬಳಿಕ ಏಕದಿನದಲ್ಲಿ 49 ಶತಕಗಳನ್ನು ಬಾರಿಸಿದ್ದರು. ಅಲ್ಲದೆ 463 ಏಕದಿನ ಪಂದ್ಯಗಳಲ್ಲಿ 44.83ರ ಸರಾಸರಿಯಲ್ಲಿ 18426 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 96 ಅರ್ಧಶತಕಗಳು ಸೇರಿವೆ. ಹಾಗೆಯೇ ಏಕದಿನದಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆಗೆ ಪಾತ್ರವಾಗಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ldqSRL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...