ಪಿಎಫ್ ಐ ಸಂಘಟನೆ ಪ್ರಭಾವಕ್ಕೆ ಒಳಗಾದ ಕೊಡಗು ಡಿಸಿ, ವೈರಲ್ ಸುದ್ದಿ ವಿರುದ್ಧ ದೂರು ಕೊಟ್ಟ ಜಾಯ್

ಮಲಯಾಳಿಗಳ ಪರವಾಗಿ ಹೆಚ್ಚು ಒಲವು ತೋರಿಸುತ್ತಿದ್ದೇನೆ ಎಂದು ಕೆಲ ಕಿಡಿಗೇಡಿಗಳು ತನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕೇರಳ ಮೂಲದವರಾದ ಅನ್ನೀಸ್ ಕೆ ಜಾಯ್ ಅವರು ಕೊಡಗಿನಲ್ಲಿರುವ ಮಲಯಾಳಿಗಳಿಗೆ ಜಮ್ಮಾ ಭೂಮಿಯನ್ನು ಅಕ್ರಮವಾಗಿ ಕೊಡಿಸಿದ್ದಾರೆ ಎಂದೆಲ್ಲ ವಾಟ್ಸಾಪ್ ನಲ್ಲಿ ಸಂದೇಶ ಹರಿದಾಡುತ್ತಿದೆ. ಜೊತೆಗೆ ಅನ್ನಿ ಕೆ ಜಾಯ್ ಅವರು ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದು, ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಈ ಮೂಲಕ ಜಮ್ಮಾ ಕೊಡವರು ಮತ್ತು ಕೊಡಗು ಗೌಡರ ವಿರುದ್ಧ ಹುನ್ನಾರ ನಡೆಸುತ್ತಿದ್ದಾರೆ. ಮಾತ್ರವಲ್ಲ ಜಮ್ಮಾ ಕೊಡವರಿಗೆ ಮತ್ತು ಕೊಡಗು ಗೌಡರಿಗೆ ಸೇರಿದ ಜಾಗವನ್ನು ತಪ್ಪಾಗಿ ಗುರುತು ಮಾಡಿ ಮಲೆಯಾಳಿಗಳಿಗೆ ಕೊಡಿಸುತ್ತಿದ್ದಾರೆ ಎಂದು ಆರೋಪಿಸಿ ವಾಟ್ಸಾಪ್ ನಲ್ಲಿ ಸುದ್ದಿ ಹಬ್ಬಿಸಲಾಗುತ್ತಿದೆ. ಇತ್ತೀಚೆಗೆ ಜಮ್ಮಾ ಭೂಮಿಯ ನದಿ ಪಾತ್ರದಲ್ಲಿ ಅಕ್ರಮ ನಿವೇಶನ ಕಟ್ಟಿಸಿ ಕೊಡಲಾಗಿದೆ ಎಂದು ಅವರನ್ನು ಒತ್ತಾಯಪೂರ್ವಕವಾಗಿ ಒಕ್ಕಲೆಬ್ಬಿಸಲಾಗಿತ್ತು. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಜಮ್ಮಾ ಭೂಮಿಯನ್ನು ಅಕ್ರಮವಾಗಿ ವಶ ಮಾಡಿಕೊಂಡವರು ಎನ್ನಲಾಗಿದೆ. ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ ಸಂತ್ರಸ್ತರಾಗಿದ್ದವರಿಗೆ ವಸತಿ ಕಲ್ಲಿಸುವ ಉದ್ದೇಶಕ್ಕಾಗಿ ಜಮ್ಮಾ ಭೂಮಿಯಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಒಕ್ಕಲೆಬ್ಬಿಸಿ ಸಂತ್ರಸ್ತರಿಗೆ ನೆಲೆಸಲು ಅವಕಾಶ ಮಾಡಿಕೊಡಲು ಡಿಸಿ ಆದೇಶ ಹೊರಡಿಸಿದ್ದರು. ನೆಲ್ಲಿಹುಡಿಕೆರಿಯಲ್ಲಿ 10 ಎಕರೆ ಒತ್ತುವರಿ ಜಮೀನಿನಲ್ಲಿ ವಾಸವಾಗಿದ್ದವರನ್ನು ಎಬ್ಬಿಸಲು ಮುಂದಾದಾಗ ಹೈಕೋರ್ಟ್ ನಿಂದ ತಡೆಯಾಜ್ಞೆ ತರಲಾಗಿತ್ತು. ಹೀಗಾಗಿ ಅಕ್ರಮವಾಗಿ ಅಲ್ಲಿ ನೆಲೆಸಿರುವವರು ಜಿಲ್ಲಾಧಿಕಾರಿ ಅನ್ನೀಸ್ ಅವರ ಕ್ರಮದಿಂದ ಸಿಟ್ಟಿಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಡಿಸಿ ವಿರುದ್ಧ ಈ ರೀತಿ ಅವಹೇಳನಕಾರಿ ಸಂದೇಶಗಳನ್ನು ಹಬ್ಬಿಸಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ತನಿಖೆಗೊಳಪಡಿಸಿದ್ದು, ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾಹಿತಿ ನೀಡಿದ್ದಾರೆ. ಏನಿದು ಜಮ್ಮಾ ಭೂಮಿ:- ಬ್ರಿಟೀಷರು ಮತ್ತು ರಾಜರು ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ ಕೊಡವರು ಸಲ್ಲಿಸಿದ ಅಮೋಘ ಸೇವೆಯನ್ನು ಮೆಚ್ಚಿ ಕೃತಜ್ಞತಾ ಪೂರ್ವಕವಾಗಿ ಬಳುವಳಿ ನೀಡಿದ ಜಾಗವನ್ನು ಜಮ್ಮಾ ಭೂಮಿ ಎನ್ನಲಾಗುತ್ತದೆ. ಈ ಜಮ್ಮಾ ಭೂಮಿಯ ಮಾಲೀಕರು ಯಾವುದೇ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಕಾಯ್ದೆಯಿಂದ ವಿನಾಯ್ತಿ ಪಡೆದು ಕೋವಿಯನ್ನು ತಮ್ಮಲ್ಲಿ ಇಟ್ಟುಕೊಳ್ಳುವ ವಿಶೇಷ ಅಧಿಕಾರ ಹೊಂದಿದ್ದಾರೆ.


from India & World News in Kannada | VK Polls https://ift.tt/2kY7GHA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...