ಪಾಕ್‌ನಲ್ಲಿ 43 ಸಿಖ್‌ ಬಾಲಕಿಯರ ಬಲವಂತದ ಮತಾಂತರ: ಅಕಾಲಿದಳ ನಾಯಕನ ಹೇಳಿಕೆ

ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಇತ್ತೀಚೆಗೆ ಇಟ್ಟು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 43 ಬಾಲಕಿಯರನ್ನು ಅಪಹರಿಸಿ ಮಾಡಲಾಗಿದೆ ಎಂದು ಶಿರೋಮಣಿ ಅಕಾಲಿದಳ ನಾಯಕ ಮಂಜಿಂದರ್ ಎಸ್ ಸಿರ್ಸಾ ಹೇಳಿದ್ದಾರೆ. ದಿಲ್ಲಿಯ ಸಿಖ್ ಗುರುದ್ವಾರ ಆಡಳಿತ ಸಮಿತಿ (ಡಿಎಸ್‌ಜಿಎಂಸಿ) ಅಧ್ಯಕ್ಷರೂ ಆಗಿರುವ ಸಿರ್ಸಾ, ಪಾಕಿಸ್ತಾನದಲ್ಲಿ ಇನ್ನೂ 12 ಸಿಖ್ ಬಾಲಕಿಯರನ್ನು ಅಪಹರಿಸಿ ಬಲವಂತದಿಂದ ಮತಾಂತರ ಮಾಡಲಾಗಿದೆ ಎಂದು ವಿವರ ನೀಡಿದರು. ಒಟ್ಟಾರೆ 43 ಮಂದಿ ಸಿಖ್ ಬಾಲಕಿಯರನ್ನು ಈ ರೀತಿ ಬಲವಂತದಿಂದ ಇಸ್ಲಾಮ್‌ಗೆ ಮತಾಂತರ ಮಾಡಲಾಗಿದೆ ಎಂದು ಸಿರ್ಸಾ ಹೇಳಿದರು. ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನೇರ ದಾಳಿಯಿದು ಎಂದು ಬಣ್ಣಿಸಿರುವ ಅವರು, ಈ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಗೆ ಒಯ್ಯುವಂತೆ ಗೃಹಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದರು. ಎರಡು ದಿನಗಳ ಹಿಂದೆ ಇದೇ ರೀತಿ ಮತಾಂತರಗೊಳಿಸಿ ಬಲವಂತ ಮದುವೆಗೆ ಒಳಗಾಗಿದ್ದ ಸಿಖ್ ಬಾಲಕಿ ಜಗಜಿತ್ ಕೌರ್‌ ಮರುದಿನ ತನ್ನ ಮನೆಗೆ ಹಿಂದಿರುಗಿದ್ದಾಳೆ. ಈ ಪ್ರಕರಣದಲ್ಲಿ ಪಾಕ್ ಅಧಿಕಾರಿಗಳು ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ. 'ಜಗಜಿತ್ ಕೌರ್‌ ನಂಕಾನಾ ಸಾಹಿಬ್‌ನಲ್ಲಿರುವ ತನ್ನ ಮನೆಗೆ ಹಿಂದಿರುಗಿದ್ದಾಳೆ. ಜಗಜಿತ್ ಕೌರ್ ಪರ ಧ್ವನಿಯೆತ್ತಿದ ಎಲ್ಲರಿಗೂ ಕೃತಜ್ಞತೆಗಳು. ನಮ್ಮ ಪುತ್ರಿಗೆ ಆದ ಅನ್ಯಾಯವನ್ನು ಸರಿಪಡಿಸಲಾಗಿದೆ. ನಾಗರಿಕ ಜಗತ್ತಿನಲ್ಲಿ ಎಲ್ಲೂ ಇಂತಹ ಬಲವಂತದ ಮತಾಂತರಕ್ಕೆ ಜಾಗವಿಲ್ಲ. ಇದನ್ನು ನಿಲ್ಲಿಸಲೇಬೇಕು' ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.


from India & World News in Kannada | VK Polls https://ift.tt/2ZH7cIj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...