ಹೊಸದಿಲ್ಲಿ: ಯಾವುದೇ ದೇಶದ ಆಂತರಿಕ ವಿಚಾರಗಳಲ್ಲಿ 'ಬಾಹ್ಯ ಶಕ್ತಿಗಳ ಪ್ರಭಾವ'ಕ್ಕೆ ಅವಕಾಶವಿಲ್ಲ ಎಂದು ಭಾರತ ಮತ್ತು ಬುಧವಾರ ಜಂಟಿ ಹೇಳಿಕೆಯಲ್ಲಿ ದೃಢವಾಗಿ ಘೋಷಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆದ ಬದಲಾವಣೆಗಳು ಮತ್ತು ಅಫಘಾನಿಸ್ತಾನದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಹೇಳಿಕೆ ನೀಡಿದ್ದಾರೆ. 'ಯಾವುದೇ ರಾಷ್ಟ್ರದ ಆಂತರಿಕ ವಿಚಾರಗಳಲ್ಲಿ ಹೊರಗಿನ ಶಕ್ತಿಗಳು ಪ್ರಭಾವ ಬೀರಲು ಹವಣಿಸುವುದನ್ನು ನಾವಿಬ್ಬರೂ ಬಲವಾಗಿ ವಿರೋಧಿಸುತ್ತೇವೆ' ಎಂದು ಉಭಯ ನಾಯಕರು ವ್ಲಾಡಿವೊಸ್ಟಾಕ್ನಲ್ಲಿ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. 'ಅಂತಾರಾಷ್ಟ್ರೀಯ ಕಾನೂನಿನ ಮಹತ್ವವನ್ನು ಹಾಗೂ ವಿಶ್ವಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿರುವ ಉದ್ದೇಶಗಳು ಮತ್ತು ಸಿದ್ಧಾಂತಗಳಿಗೆ ಬದ್ಧತೆಯನ್ನು' ಇಬ್ಬರೂ ನಾಯಕರು ಬಲವಾಗಿ ಪ್ರತಿಪಾದಿಸಿದರು. ಸದಸ್ಯ ರಾಷ್ಟ್ರಗಳ ಆಂತರಿಕ ವಿಷಯಗಳಲ್ಲಿ ಅನ್ಯ ರಾಷ್ಟ್ರಗಳು ಹಸ್ತಕ್ಷೇಪ ನಡೆಸುವುದನ್ನು ವಿಶ್ವಸಂಸ್ಥೆ ಚಾರ್ಟರ್ ಬಲವಾಗಿ ವಿರೋಧಿಸುತ್ತದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡನೆ ಬಳಿಕ ಭಾರತ ರಾಜತಾಂತ್ರಿಕವಾಗಿ ತನ್ನ ಕ್ರಮವನ್ನು ವಿಶ್ವದ ಮುಂದೆ ಬಲವಾಗಿ ಸಮರ್ಥಿಸಿಕೊಂಡಿದೆ. ರಷ್ಯಾ ಅಧ್ಯಕ್ಷರ ಜತೆಗಿನ 'ವೈಯಕ್ತಿಕ ಸ್ನೇಹ'ವನ್ನು ಪ್ರಸ್ತಾಪಿಸುವ ಮೂಲಕ ರಷ್ಯಾ ಭಾರತದ ಬೆಂಬಲಕ್ಕೆ ನಿಲ್ಲುವಂತೆ ಮಾಡಿದ್ದಾರೆ. 2003ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜತೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ರಷ್ಯಾಗೆ ಭೇಟಿ ನೀಡಿದ್ದೆ. ಆಗ ಪುಟಿನ್ ಅವರು ನನ್ನನ್ನು ನಗಣ್ಯರಂತೆ ನಡೆಸಿಕೊಳ್ಳಲಿಲ್ಲ' ಎಂದು ಮೋದಿ ಹೇಳಿದ್ದಾರೆ.
from India & World News in Kannada | VK Polls https://ift.tt/2Lve0zu