ಕುಂಭದ್ರೋಣ ಮಳೆಗೆ ಮುಳುಗಿದ ಮುಂಬೈ: ಇನ್ನೂ 2 ದಿನ ನಿರಂತರ ವರ್ಷಧಾರೆ

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈ, ಮಹಾ ಮಳೆಗೆ ಒದ್ದೆ ಮುದ್ದೆಯಾಗಿದೆ. ಧಾರಾಕಾರವಾಗಿ ಎಡಬಿಡದೆ ಸುರಿಯುತ್ತಿರುವ ಮಳೆಗೆ, ನಗರ ಬಹುತೇಕ ಮುಳುಗಡೆಯಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಬೈ ಜೀವನಾಡಿ ರೈಲು ಮಾರ್ಗ ಬಹುತೇಕ ಸ್ತಬ್ಧವಾಗಿದೆ. ಹಲವು ರೈಲು ಮಾರ್ಗಗಳು ಜಲಾವೃತವಾಗಿವೆ. ಸಮುದ್ರ ತೀರದ ರೈಲು ಮಾರ್ಗಗಳಲ್ಲಿ ಸಂಚಾರ ವಿಳಂಬವಾಗಿದೆ. ಮುಂಬೈ ನಗರ ಬಸ್ ಸಾರಿಗೆ ‘ಬೆಸ್ಟ್ ಬಸ್’ಗಳ ಬಹುತೇಕ ಮಾರ್ಗಗಳು ಬಂದ್ ಆಗಿವೆ. ಹವಾಮಾನ ಇಲಾಖೆ ಪ್ರಕಾರ ಮುಂದಿನ 2 ದಿನಗಳ ಕಾಲ ಇದೇ ರೀತಿ ಧಾರಾಕಾರ ಮಳೆ ಮುಂದುವರೆಯಲಿದೆ. ಮುಂಬೈ ಪೊಲೀಸರೂ ಕೂಡಾ ಮಳೆಯಿಂದ ತೊಂದರೆಗೀಡಾಗುವ ಜನರ ರಕ್ಷಣೆಗೆ ಸಜ್ಜಾಗಿದೆ. ಕಿಂಗ್ ಸರ್ಕಲ್ ರೇಲ್ವೇ ನಿಲ್ದಾಣ ಹಾಗೂ ಗಾಂಧಿ ಮಾರ್ಕೆಟ್ ಪ್ರದೇಶದಲ್ಲಂತೂ ಭಾರೀ ಪ್ರಮಾಣದ ಮಳೆ ನೀರು ಜಮಾವಣೆಯಾಗಿದೆ. ಥಾಣೆ, ನವೀ ಮುಂಬೈಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 100 ಮಿ.ಮೀಗೂ ಅಧಿಕ ಪ್ರಮಾಣದ ಮಳೆಯಾಗಿದೆ. ಥಾಣೆಯಲ್ಲಂತೂ ಕಳೆದ 24 ಗಂಟೆಗಳಲ್ಲಿ 177 ಮಿ. ಮೀ. ಮಳೆಯಾಗಿದೆ. ಮುಂಬೈ ಮಹಾನಗರದ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ತಗ್ಗು ಪ್ರದೇಶದ ನಿವಾಸಿಗಳ ಗೋಳು ಹೇಳತೀರದಾಗಿದೆ. ಮುಂಬೈ ಮಾತ್ರವಲ್ಲ, ಪುಣೆ ನಗರಕ್ಕೂ ಮಹಾ ಮಳೆಯ ಬಿಸಿ ತಟ್ಟಿದೆ. ನಿನ್ನೆ ರಾತ್ರಿಯಿಂದ ಪುಣೆಯಲ್ಲೂ ಧಾರಾಕಾರ ಮಳೆ ಆಗ್ತಿದೆ. ಒಟ್ಟಿನಲ್ಲಿ ಮುಂದಿನ 2 ದಿನಗಳ ಕಾಲ ಇದೇ ರೀತಿ ಸುರಿಯುವ ಧಾರಾಕಾರ ಮಳೆಯನ್ನು ಸಮರ್ಥವಾಗಿ ಎದುರಿಸಲು ಮುಂಬೈ ಮಹಾನಗರ ಸಜ್ಜಾಗಿದೆ.


from India & World News in Kannada | VK Polls https://ift.tt/2NPH0oG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...