ಬೆಂಗಳೂರು: ಆಸ್ಟ್ರೇಲಿಯಾ ತಂಡ ಕೊನೇ ಬಾರಿ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿರುವುದು 2004-05ರಲ್ಲಿ. ಇದಾದ ಬಳಿಕ ಹಲವು ಬಾರಿ ಭಾರತಕ್ಕೆ ಬಂದರೂ ಟೆಸ್ಟ್ ಸರಣಿ ಗೆಲುವು ಕಾಂಗರೂ ಪಡೆಗೆ ಮರಿಚಿಕೆಯಾಗಿ ಉಳಿದಿದೆ. 2017ರಲ್ಲಿ ಕೊನೇ ಬಾರಿ ಭಾರತ ಪ್ರವಾಸ ಕೈಗೊಂಡಿದ್ದಾಗ ಸ್ಟೀವ್ ಸ್ಮಿತ್ ಸಾರಥ್ಯದ ಆಸ್ಟ್ರೇಲಿಯಾ ತಂಡ 1-2 ಅಂತರದಲ್ಲಿ ಆತಿಥೇಯರಿಗೆ ಶರಣಾಗಿತ್ತು. ಆದರೆ, ಈ ಬಾರಿ ಜಯ ದಕ್ಕಿಸಿಕೊಳ್ಳುವ ಹಠಿದೊಂದಿಗೆ ವೇಗಿ ಪ್ಯಾಟ್ ಕಮಿನ್ಸ್ ಸಾರಥ್ಯದಲ್ಲಿ ಭಾರತಕ್ಕೆ ಬಂದಿದೆ. ನಾಲ್ಕು ಟೆಸ್ಟ್ಗಳ ಮೊದಲ ಹಣಾಹಣಿ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಫೆಬ್ರವರಿ 9ರಂದು ಶುರುವಾಗಲಿದೆ.1996-97ರಲ್ಲಿ ಆರಂಭವಾದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಭಣಿಯಲ್ಲಿ ಈವರೆಗೆ ಒಟ್ಟು 15 ಸರಣಿಗಳು ನಡೆದಿದ್ದು, ಟೀಮ್ ಇಂಡಿಯಾ ಒಟ್ಟು 9 ಬಾರಿ ಟ್ರೋಫಿ ಗೆದ್ದು ಪ್ರಾಬಲ್ಯ ಮೆರೆದಿದೆ. ಕಳೆದ ಮೂರು ಆವೃತ್ತಿಗಳಲ್ಲಿ ಜಯ ದಾಖಲಿಸಿ ಹ್ಯಾಟ್ರಿಕ್ ಸಾಧನೆಯನ್ನೂ ಮೆರೆದಿದೆ. ಅದರಲ್ಲಿ 2018-19 ಮತ್ತು 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಾಂಗರೂ ಪಡೆಯನ್ನು ಅವರದ್ದೇ ಅಂಗಣದಲ್ಲಿ ಬಗ್ಗುಬಡಿದಿರುವ ಭಾರತ ತಂಡ ಈ ಬಾರಿಯೂ ಸರಣಿ ಗೆಲ್ಲುವ ಫೇವರಿಟ್ ತಂಡವಾಗಿದೆ.ಅಂದಹಾಗೆ ಸರಣಿ ಆರಂಭಕ್ಕೂ ಮುನ್ನ ಎರಡೂ ತಂಡಗಳು ಗಾಯದ ಸಮಸ್ಯೆಗಳ ಕಾರಣ ಕೆಲ ಪ್ರಮುಖ ಆಟಗಾರರ ಸೇವೆಯನ್ನು ಕಳೆದುಕೊಂಡಿವೆ. ಆದರೂ ಇತ್ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿಯನ್ನೇ ನಿರೀಕ್ಷಿಸಲಾಗಿದೆ. ಈ ಸಂದರ್ಭದಲ್ಲಿ 16ನೇ ಆವೃತ್ತಿಯ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ನಿರ್ಮಾಣವಾಗಲಿರುವ ಕೆಲ ದಾಖಲೆಗಳ ವಿವರ ಇಲ್ಲಿ ನೀಡಲಾಗಿದೆ.ನಾಗ್ಪುರ ಟೆಸ್ಟ್ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್!
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/FaQXH9R
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಬೆಂಗಳೂರು: ಇಡೀ ಜಗತ್ತಿಗೆ ಮಾರಕವಾಗಿದ್ದ ಕೊರೊನಾ ಎಂಬ ವೈರಸ್ನ ಅಂತ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಕೊರೊನಾ ಸಂಹರಿಸಲು ಕೊರೊನಾ ಲಸಿಕೆಗಳು ಈಗಾಗಲೇ ಲಗ್ಗೆ ಇಟ್ಟ...
-
ತೆರಿಗೆ ಹಣವನ್ನು ಸರಕಾರಿ ಖಜಾನೆಗೆ ಜಮೆ ಮಾಡದೆಯೇ ಕಾರುಗಳನ್ನು ನೋಂದಣಿ ಮಾಡಿ ಅಕ್ರಮವೆಸಗಿರುವ ಕುರಿತು ‘ವಿಜಯ ಕರ್ನಾಟಕ’ವು 2021ರ ಡಿ. 14ರಂದು 'ನಕಲಿ ನೋಂದಣಿ, ತೆ...
-
- ರಮೇಶ್ ಕುಮಾರ್ ನಾಯಕ್ ಅಂದು ಸಂಜೆ, ಅಮ್ಮಾ ಎರಡೇ ಗಂಟೆಯೊಳಗೆ ವಾಪಸ್ ಬರುತ್ತೇನೆ ಎಂದು ಮನೆಯ ಹೊಸ್ತಿಲು ದಾಟಿ ಹೋಗಿದ್ದಳು ಮಗಳು. ರಾತ್ರಿ ಗಂಟೆ ಎಂಟಾದರೂ ಬಾರ...
-
ಮೆಲ್ಬೋರ್ನ್: ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲನೇ ದಿನ ಅನುಪಸ್ಥಿತಿಯಲ್ಲಿ ನಾಯಕತ್...
-
ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನ...