ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ತನ್ನ ಯಶಸ್ವಿ ಆರೋಗ್ಯ ವಿಮಾ ಯೋಜನೆಯನ್ನು ಮರುಜಾರಿಗೊಳಿಸಿದೆ. ಆದರೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ವಿಮಾ ಯೋಜನೆಗಾಗಿ ಸಲ್ಲಿಸಲಾಗಿರುವ ಅರ್ಜಿದಾರರಿಗೆ ಕಾರ್ಡ್ ಗಳನ್ನು ನೀಡುವ ವ್ಯವಸ್ಥೆಯು ಕೇಂದ್ರೀಕೃತವಾಗಿದ್ದು, ಎಲ್ಲಾ ಕಾರ್ಡ್ ಗಳು ಬೆಂಗಳೂರಿನಲ್ಲಿ ಮಾತ್ರವೇ ಮುದ್ರಣವಾಗಿ ಆಯಾ ಜಿಲ್ಲೆಗಳಿಗೆ ವಿತರಣೆಯಾಗುವ ವ್ಯವಸ್ಥೆಯಿದೆ. ಇದರ ಪರಿಣಾಮ, ಮೈಸೂರಿನಲ್ಲಿ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವ ಸುಮಾರು 60 ಸಾವಿರ ನಾಗರಿಕರಲ್ಲಿ ಕೇವಲ 2 ಸಾವಿರ ಕಾರ್ಡ್ ಗಳು ಮಾತ್ರ ವಿತರಣೆಯಾಗಿವೆ.
from India & World News in Kannada | VK Polls https://ift.tt/BV4xKjR