ಮುಂಗಾರಿನ ಹಂಗಾಮಿನ ವೇಳೆ, ಸಾಧಾರಣವಾಗಿ ದಾವಣಗೆರೆ ರೈತರು ಮುಸುಕಿನ ಜೋಳ (ಮೆಕ್ಕೆ ಜೋಳ) ಬೆಳೆಯುತ್ತಾರೆ. ಅದರ ಕಟಾವು ಆದ ಕೂಡಲೇ ಹಿಂಗಾರಿನಲ್ಲಿ ಕಡಲೆ ಕಾಳು ಬಿತ್ತನೆ ಮಾಡುತ್ತಾರೆ. ಈ ಬಾರಿ ಜಗಳೂರು ತಾಲೂಕಿನಲ್ಲಿ ಸುಮಾರು 6 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕಡಲೆ ಬಿತ್ತನೆಯಾಗಿದೆ. ಆದರೆ, ಈ ಬಾರಿ ಇಳುವರಿ ಕುಂಠಿತವಾಗಿದೆ. ಮತ್ತೊಂದೆಡೆ, ಮಾರುಕಟ್ಟೆಯಲ್ಲಿ ಕಡಲೆ ಕಾಳಿನ ಧಾರಣೆ ಕುಸಿದಿದೆ. ಮೊದಲೇ ಇಳುವರಿ ಕಡಿಮೆಯಾಗಿದ್ದರ ಬಗ್ಗೆ ಬೇಸರಗೊಂಡಿದ್ದ ರೈತರನ್ನು ಈಗ ಮಾರುಕಟ್ಟೆಯಲ್ಲಿ ಕಡಲೆಕಾಳಿನ ದರ ಕುಸಿದಿರುವುದು ಆತಂಕಕ್ಕೀಡು ಮಾಡಿದೆ.
from India & World News in Kannada | VK Polls https://ift.tt/YloT9hk