ಉಕ್ರೈನ್- ರಷ್ಯಾ ಯುದ್ಧವೇನೋ ನಿಂತಿತು. ಅದರೆ ಅದು ಕೊಟ್ಟ ನೋವು ಮಾತ್ರ ಸದಾ ಚುಚ್ಚುತ್ತಲೇ ಇರುತ್ತದೆ. ಸರಿಯಾಗಿ ಒಂದು ವರ್ಷದ ಹಿಂದೆ ಬಂಕರ್ ನಲ್ಲಿ ಹಸಿವಿನಿಂದ ಕುಳಿತಿದ್ದ ತನ್ನ ಗೆಳೆಯರಿಗಾಗಿ ಆಹಾರ ತರಲೆಂದು ಹೊರಗೆ ಬಂದ ಹಾವೇರಿ ಮೂಲದ ವೈದ್ಯ ವಿದ್ಯಾರ್ಥಿ ನವೀನ್ ರಷ್ಯಾಪಡೆಗಳ ಬಾಂಬ್ ದಾಳಿಗೆ ಮೃತಪಟ್ಟಿದ್ದ. ವೈದ್ಯನಾಗಿ ನಾಡಿನ ಸೇವೆ ಮಾಡಲು ಬಯಸಿದ್ದ ಮಗನನ್ನು ಕಳೆದುಕೊಂಡ ದುಃಖದಲ್ಲಿ ಚಳಗೇರಿಯ ಶೇಖರಗೌಡ ಮತ್ತು ವಿಜಯಲಕ್ಷ್ಮೀ ಇಂದಿಗೂ ಕಣ್ಣೀರಾಗುತ್ತಾರೆ. ಆತನ ನೆನಪು ಶಾಶ್ವತವಾಗಿರಲೆಂದು ಕಟ್ಟಿದ ಮನೆಗೆ ಶುಕ್ರವಾರ ಗೃಹ ಪ್ರವೇಶ ನಡೆಯುತ್ತಿದೆ.
from India & World News in Kannada | VK Polls https://ift.tt/qacI0uL