ಇದೇ ವರ್ಷ ಆಗಸ್ಟ್ 17ರಂದು ರಶ್ದಿಯವರು ನ್ಯೂಯಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಮಾರಂಭವೊಂದರಲ್ಲಿ ಮುಂಬೈ ಮೂಲದ ರಶ್ದಿ ಭಾಷಣ ಮಾಡುತ್ತಿದ್ದಾಗ, ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ನುಗ್ಗಿ ಇವರ ಮೇಲೆ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿ ದೀರ್ಘಕಾಲದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ಕಣ್ಣು, ಕೈಗಳ ನರಗಳು, ಪಿತ್ತಕೋಶ ಮುಂತಾದ ಭಾಗಗಳ ಮೇಲೆ ಗಾಯಗಳಾಗಿದ್ದರಿಂದ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅವರು ಒಂದು ಕಣ್ಣು ಹಾಗೂ ಒಂದು ಕೈಯ್ಯಿನ ಸ್ವಾಧೀನ ಕಳೆದುಕೊಂಡಿರುವುದಾಗಿ ಅವರ ವಕ್ತಾರರಾದ ಆ್ಯಂಡ್ರ್ಯೂ ತಿಳಿಸಿದ್ದಾರೆ.
from India & World News in Kannada | VK Polls https://ift.tt/DqX04Ri