ಪಂಚಗಂಗಾವಳಿ, ಸೌಪರ್ಣಿಕಾ ನದಿಗಳಲ್ಲಿ ನಡುಗಡ್ಡೆಗಳು ದೊಡ್ಡ ಮಟ್ಟದಲ್ಲಿ ಕಾಣಸಿಗುತ್ತಿವೆ. ಪಂಚಗಂಗಾವಳಿಯ ಖಾರ್ವಿಕೇರಿ, ಹೇರಿಕುದ್ರು, ಆನಗಳ್ಳಿ, ಸೌಪರ್ಣಿಕಾ ನದಿಯ ತಲ್ಲೂರು, ರಾಜಾಡಿ, ವಾರಾಹಿ ನದಿಯ ಕಂಡ್ಲೂರಿನಿಂದ ಬಸ್ರೂರು ವ್ಯಾಪ್ತಿಯ ವಿಶಾಲ ನದಿಯ ನಡುವೆ ನಡುಗಡ್ಡೆಗಳು ಬೆಳೆದು ನಿಂತಿವೆ. ಕಾಂಡ್ಲವನದ ಜತೆಯಲ್ಲಿ ಕಾಟು ಮರಗಳನ್ನೊಳಗೊಂಡ ದಿಬ್ಬಗಳು ನದಿಯ ವಿಸ್ತಾರತೆ ನುಂಗಿ ಹಾಕಿದ್ದು, ಭವಿಷ್ಯತ್ತಿನಲ್ಲಿ ನದಿಗಳ ಸಹಜ ಹರಿವಿಗೆ ಇವು ಅಪಾಯಕಾರಿ ಆಗಬಹುದೆಂಬ ಅಭಿಪ್ರಾಯ ಮೂಡಿದೆ.
from India & World News in Kannada | VK Polls https://ift.tt/NHelkSt