ಕೈಗಾರಿಕಾ ಹೂಡಿಕೆ ಮಾತ್ರವಲ್ಲದೆ, ಕೃಷಿ, ತೋಟಗಾರಿಕೆ ಉತ್ಪನ್ನಗಳ ರಫ್ತು ಚಟುವಟಿಕೆ, ಉನ್ನತ ಶಿಕ್ಷಣದ ಅವಕಾಶಗಳ ವಿಸ್ತರಣೆ ಹಾಗೂ ಮತ್ತಿತರ ಅಭಿವೃದ್ಧಿ ದೃಷ್ಟಿಯಿಂದಲೂ ಉತ್ತರ ಕರ್ನಾಟಕ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವನ್ನು ನಿರಾಣಿ ಪ್ರತಿಪಾದಿಸಿದರು. ಈ ಉದ್ದೇಶಕ್ಕೆ ಕಿತ್ತೂರು ಸೂಕ್ತ. ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳನ್ನು ದೇಶೀಯ ವಿಮಾನಯಾನ ಸೇವೆಗೆ ಬಳಸಿಕೊಂಡು ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಿಸುವುದರ ಅನುಕೂಲಗಳ ಕುರಿತು ಅವರು ಸಂವಾದದಲ್ಲಿ ಬೆಳಕು ಚೆಲ್ಲಿದರು.
from India & World News in Kannada | VK Polls https://ift.tt/1h6ZkwK