ರಷ್ಯಾ ಕಬಂಧ ಬಾಹು ವಿಸ್ತರಣೆ; ಉಕ್ರೇನ್‌ ಮೇಲೆ ಕ್ಷಿಪಣಿ, ಶೆಲ್‌, ರಾಕೆಟ್‌ ದಾಳಿ ಮುಂದುವರಿಕೆ

ಕೀವ್‌: ಉಕ್ರೇನ್‌ ರಾಜಧಾನಿ ಕೀವ್‌ ಹಾಗೂ ಎರಡನೇ ಬೃಹತ್‌ ನಗರ ಕಾರ್ಕಿವ್‌ ಮೇಲೆ ನಿಯಂತ್ರಣ ಸಾಧಿಸಿರುವ ಪಡೆಗಳು ಗುರುವಾರ ಬಂದರು ನಗರಿ ಖೆರ್ಸಾನ್‌ ಅನ್ನು ಸಹ ವಶಪಡಿಸಿಕೊಳ್ಳುವ ಮೂಲಕ ಆಕ್ರಮಣ ಮತ್ತಷ್ಟು ತೀವ್ರಗೊಳಿಸಿದೆ. ಫೆ.24ರಂದು ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿದ ಬಳಿಕ ಸಂಪೂರ್ಣವಾಗಿ ರಷ್ಯಾ ವಶಕ್ಕೆ ಬಂದ ಮೊದಲ ನಗರ ಖೆರ್ಸಾನ್‌ ಎನಿಸಿದೆ. ಖೆರ್ಸಾನ್‌ ಪ್ರಮುಖ ಕಟ್ಟಡಗಳ ಮೇಲೆ ಕ್ಷಿಪಣಿ, ರಾಕೆಟ್‌ ದಾಳಿ ಆರಂಭಿಸಿದ್ದ ಪುಟಿನ್‌ ಪಡೆಗಳು ಈಗ ಇಡೀ ನಗರದ ಮೇಲೆ ಹಿಡಿತ ಸಾಧಿಸಿವೆ. ಸ್ಥಳೀಯ ಕಚೇರಿಗಳಿಂದ ಉಕ್ರೇನ್‌ ಅಧಿಕಾರಿಗಳನ್ನು ಹೊರಗೆ ಕಳುಹಿಸಿ ಎಲ್ಲ ಪ್ರಮುಖ ಕಚೇರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆ ಮೂಲಕ ವ್ಯೂಹಾತ್ಮಕ ದೃಷ್ಟಿಯಲ್ಲೂ ಪ್ರಮುಖವಾಗಿರುವ ಖೆರ್ಸಾನ್‌ ಮೇಲೆ ಪ್ರಾಬಲ್ಯ ಸಾಧಿಸುವ ಮೂಲಕ ರಷ್ಯಾ ತನ್ನ ಕಬಂಧ ಬಾಹುವನ್ನು ವಿಸ್ತರಿಸಿದೆ. ಪುಟಿನ್‌ ಪಡೆಗಳ ಆಕ್ರಮಣದ ಕುರಿತು ಉಕ್ರೇನ್‌ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ''ಸರಕಾರಿ ಕಚೇರಿಗಳ ಮೇಲೆ ರಷ್ಯಾ ಸೈನಿಕರು ನುಗ್ಗಿದ್ದು, ಎಲ್ಲ ಸಿಬ್ಬಂದಿಯನ್ನು ಹೊರಗೆ ಕಳುಹಿಸುವ ಮೂಲಕ ಪಾರಮ್ಯ ಮೆರೆಯುತ್ತಿದ್ದಾರೆ. ಇಡೀ ನಗರ ಈಗ ರಷ್ಯಾ ಪಾಲಾಗಿದೆ,'' ಎಂದು ಹೇಳಿದ್ದಾರೆ. ಸುಮಾರು 2.9 ಲಕ್ಷ ಜನರಿರುವ ನಗರದ ಹೊರವಲಯದಿಂದ ಬಾಂಬ್‌ಗಳು, ಶೆಲ್‌, ಕ್ಷಿಪಣಿ ಹಾಗೂ ರಾಕೆಟ್‌ ದಾಳಿ ನಡೆಸಿ ನಗರವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಬಂದರು ವಶ: ಖೆರ್ಸಾನ್‌ ಬಂದರುಗಳ ನಗರ ಎಂದೇ ಖ್ಯಾತಿಯಾಗಿದ್ದು, ಇಡೀ ನಗರದ ಮೇಲೆ ಹಿಡಿತ ಸಾಧಿಸುವ ಜತೆಗೆ ಆಯಕಟ್ಟಿನ ಸ್ಥಳದಲ್ಲಿರುವ 'ಬ್ಲ್ಯಾಕ್‌ ಸೀ' ಬಂದರನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ದೇಶದ ವ್ಯಾಪಾರ-ವಹಿವಾಟು ಮೇಲೂ ನಿಯಂತ್ರಣ ಸಾಧಿಸಲು ಪುಟಿನ್‌ ಪಡೆಗಳು ಮುಂದಾಗಿವೆ. ಇದರ ಜತೆಗೆ ಬೇರೆ ಬಂದರುಗಳ ಮೇಲೂ ದಾಳಿ ಮಾಡುವ ಭೀತಿ ಸೃಷ್ಟಿಯಾಗಿದೆ. ಮುರಿಯೋಪೋಲ್‌ನಲ್ಲಿರುವ ಅಜೋವ್‌ ಸೀ ಸೇರಿ ಹಲವು ಬಂದರುಗಳನ್ನು ಸಹ ರಷ್ಯಾ ವಶಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
  • ಉಕ್ರೇನ್‌ ಮಾಹಿತಿ ಪ್ರಕಾರ ಇದುವರೆಗೆ ಹತ್ಯೆಗೀಡಾದ ರಷ್ಯಾ ಸೈನಿಕರು: 9,000
  • ತಮ್ಮ ದೇಶದ 498 ಸೈನಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾ ಹೇಳಿಕೊಂಡಿದೆ
ರಾಕೆಟ್‌ ಮೇಲಿನ ಭಾರತದ ಧ್ವಜ ಮರೆಮಾಚದ ರಷ್ಯಾ ಉಕ್ರೇನ್‌ ಮೇಲೆ ಮಾಡಿದ ಆಕ್ರಮಣದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ವಿರೋಧವಾಗಿ ನಿರ್ಣಯ ಮಂಡಿಸಿದ ಕಾರಣ ಬಾಹ್ಯಾಕಾಶ ರಾಕೆಟ್‌ ಮೇಲಿದ್ದ ಹಲವು ರಾಷ್ಟ್ರಗಳ ರಾಷ್ಟ್ರಧ್ವಜವನ್ನು ಮರೆಮಾಚಿರುವ ರಷ್ಯಾ, ತನ್ನ ಮಿತ್ರ ರಾಷ್ಟ್ರ ಭಾರತದ ಧ್ವಜವನ್ನು ಮಾತ್ರ ಹಾಗೆಯೇ ಬಿಟ್ಟಿದೆ. ಸೂಯೆಜ್‌ ರಾಕೆಟ್‌ ಮೇಲೆ ಭಾರತ, ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ದಕ್ಷಿಣ ಕೊರಿಯಾ ಸೇರಿ ಹಲವು ದೇಶಗಳ ಧ್ವಜಗಳನ್ನು ಚಿತ್ರಿಸಲಾಗಿತ್ತು. ಆದರೆ, ಉಕ್ರೇನ್‌ ಮೇಲೆ ದಾಳಿ ಮಾಡಿದ ಬಳಿಕ ಇವೆಲ್ಲ ರಾಷ್ಟ್ರಗಳು ಆರ್ಥಿಕ ನಿರ್ಬಂಧ ಹೇರಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲೂ ರಷ್ಯಾ ವಿರುದ್ಧದ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದವು. ಇದರಿಂದಾಗಿ ಇವುಗಳ ರಾಷ್ಟ್ರಧ್ವಜದ ಚಿತ್ರಗಳನ್ನು ಮರೆಮಾಚಲಾಗಿದೆ. ಆದರೆ, ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧದ ನಿರ್ಣಯದ ಕುರಿತ ಮತದಾನದಿಂದ ದೂರ ಉಳಿದ ಭಾರತದ ಧ್ವಜವನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದೆ. ಭಾರತ ಏನು ಮಾಡಬೇಕು ಎಂದು ಯಾರೂ ಹೇಳಬೇಕಿಲ್ಲ ಎಂದ ಫ್ರಾನ್ಸ್‌ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮಂಡಿಸಿದ ನಿರ್ಣಯದ ಕುರಿತ ಮತದಾನದಿಂದ ಭಾರತ ದೂರ ಉಳಿದ ಬೆನ್ನಲ್ಲೇ ಭಾರತದ ನಿಲುವನ್ನು ಫ್ರಾನ್ಸ್‌ ಗೌರವಿಸಿದೆ. ''ಭಾರತ ಏನು ಮಾಡಬೇಕು ಎಂದು ಯಾರೂ ಹೇಳಬೇಕಿಲ್ಲ. ಅಷ್ಟಕ್ಕೂ, ನಮಗೆ ಭಾರತದ ನಿಲುವು ಮುಖ್ಯ,'' ಎಂದು ಭಾರತದ ಫ್ರಾನ್ಸ್‌ ರಾಯಭಾರಿ ಇಮ್ಯಾನುಯೆಲ್‌ ಲೇನಿಯನ್‌ ತಿಳಿಸಿದ್ದಾರೆ. ರಷ್ಯಾ ವಿರುದ್ಧದ ಮತದಾನದಿಂದ ಭಾರತ ದೂರ ಉಳಿದ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಟೀಕೆ ಕೇಳಿಬಂದಿದ್ದವು. ಆಕ್ರಮಣ ಮಾಡಿದ ರಷ್ಯಾ ವಿರುದ್ಧ ತನಿಖೆ ಆಕ್ರಮಣ ಮಾಡುವ ಮೂಲಕ ಜಾಗತಿಕ ಶಾಂತಿಗೆ ಭಂಗ ತಂದ ಆರೋಪದ ಕುರಿತು ತನಿಖೆಗೆ ಆದೇಶಿಸಲಾಗಿದೆ. ರಷ್ಯಾ ಯುದ್ಧಾಪರಾಧ ಕುರಿತು 3ಅಂತಾರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ (ಐಸಿಸಿ) ತನಿಖೆ ಮಾಡಲು ತೀರ್ಮಾನಿಸಿದೆ. ಜಾಗತಿಕ ನಿಯಮಗಳನ್ನು ಗಾಳಿಗೆ ತೂರಿ ಉಕ್ರೇನ್‌ನಲ್ಲಿ ರಷ್ಯಾ ದಾಳಿ ಮಾಡಿರುವ ಕುರಿತು ತನಿಖೆ ಮಾಡಲಾಗುತ್ತಿದೆ. ಎರಡನೇ ಹಂತದ ಮಾತುಕತೆ ಆರಂಭ ಉಕ್ರೇನ್‌ನಲ್ಲಿ ರಷ್ಯಾ ಸೃಷ್ಟಿಸಿರುವ ಅರಾಜಕತೆಗೆ ಅಂತ್ಯ ಹಾಡುವ ದಿಸೆಯಲ್ಲಿ ಉಕ್ರೇನ್‌ ಹಾಗೂ ರಷ್ಯಾ ಮಧ್ಯೆ ಬೆಲಾರಸ್‌ನಲ್ಲಿ ಗುರುವಾರ ಎರಡನೇ ಹಂತದ ಮಾತುಕತೆ ನಡೆದಿದೆ. ಎರಡನೇ ಹಂತದ ಮಾತುಕತೆ ನಡೆದಿರುವುದನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರೇ ದೃಢಪಡಿಸಿದ್ದಾರೆ. ಅಲ್ಲದೆ, ಮಾತುಕತೆ ವೇಳೆ, ರಷ್ಯಾ ಸೇನೆಯು ನಮ್ಮ ದೇಶವನ್ನು ತೊರೆಯಬೇಕು. ಕಾರ್ಯಾಚರಣೆ ಸ್ಥಗಿತಗೊಳಿಸಿ ಉಕ್ರೇನ್‌ನಲ್ಲಿ ಶಾಂತಿ ನೆಲೆಗೊಳ್ಳಲು ಸಹಕಾರ ನೀಡಬೇಕು ಎಂದು ಜೆಲೆನ್‌ಸ್ಕಿ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.


from India & World News in Kannada | VK Polls https://ift.tt/UF6Iwin

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...