ಚಿಕ್ಕಮಗಳೂರು: ಅಪ್ಪಚ್ಚಿಯಾಗಿದ್ದು ಮನೆಗಳಲ್ಲ.. ಬಡವರ ಬದುಕು..! ಸಂತ್ರಸ್ತರ ಗೋಳು ಕೇಳೋರ್ಯಾರು?

ಇಂದಿರಾಗಾಂಧಿ ಬಡಾವಣೆಯ ಆ ನತದೃಷ್ಟರಿಗೆ ಅಂದು ಕರಾಳ ದಿನ. ಆಕಾಶವೇ ತಲೆ ಮೇಲೆ ಕಳಚಿ ಬಿದ್ದ ಅನುಭವ. ನೆತ್ತಿ ಮೇಲಿದ್ದ ಸೂರು ಕಣ್ಣೆದುರಿಗೆ ನೆಲಸಮವಾಯಿತು. ಸಂತ್ರಸ್ತರ ಗೋಳು ಮುಗಿಲು ಮುಟ್ಟಿತು. ಕಾಲಿಗೆ ಬಿದ್ದು ಅಂಗಲಾಚಿದರೂ ನಿರ್ದಯಿಗಳಿಗೆ ಕರುಣೆಯೇ ಬರಲಿಲ್ಲ. ಕಳೆದ ಜೂನ್‌ ತಿಂಗಳಲ್ಲಿ ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ಅಕ್ರಮ ಮನೆಯಲ್ಲಿದ್ದಾರೆ ಎಂಬ ಕಾರಣ ನೀಡಿ ನಗರಸಭೆಯಿಂದ ಸರಿಸುಮಾರು 25ಕ್ಕೂ ಹೆಚ್ಚು ಮನೆಗಳನ್ನು ಬುಲ್ಡೋಜರ್‌ ಹತ್ತಿಸಿ ನೆಲಸಮಗೊಳಿಸಲಾಯಿತು. ಸಂತ್ರಸ್ಥರ ಗೋಳು ಕೇಳುವವರೇ ಇಲ್ಲ.

from India & World News in Kannada | VK Polls https://ift.tt/LS4NDPb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...