ಸುಪ್ರೀಂನಲ್ಲಿ ‘ಅಯೋಧ್ಯಾ’ಕಾಂಡ 18ನೇ ಅಧ್ಯಾಯ: ಮುಸ್ಲಿಮರ ಪರ ವಾದಿಸಿದ್ರೆ ಹುಷಾರ್ ಎಂದವರಿಗೆ ಶಾಕ್!

ಹೊಸ ದಿಲ್ಲಿ: ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದದ ವಿಚಾರಣೆ, ಕೋರ್ಟ್ ನಲ್ಲಿ ಪುನಾರಂಭವಾಗಿದೆ. ವಿಚಾರಣೆಯ 18ನೇ ದಿನವಾದ ಇಂದು, ಸುನ್ನಿ ವಕ್ಫ್ ಬೋರ್ಡ್ ಹಾಗೂ ಇನ್ನಿತರ ಅರ್ಜಿದಾರರ ಪರ ವಕೀಲ ರಾಜೀವ್ ಧವನ್, ತಮಗೆ ಬಂದಿರುವ ಬೆದರಿಕೆ ಕರೆಯ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು. ಹಿರಿಯ ವಕೀಲರಾದ ರಾಜೀವ್ ಧವನ್ ಅವರಿಗೆ, ಅಯೋಧ್ಯಾ ವಿವಾದ ಸಂಬಂಧ ಮುಸ್ಲಿಮರ ಪರ ವಾದ ಮಾಡದಂತೆ ಇಬ್ಬರು ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್ ಇನ್ನೆರಡು ವಾರ ಬಳಿಕ ವಿಚಾರಣೆ ನಡೆಸೋದಾಗಿ ಹೇಳಿದೆ. ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಎನ್. ಷಣ್ಮುಗಂ ಹಾಗೂ ರಾಜಸ್ತಾನ ನಿವಾಸಿ ಸಂಜಯ್ ಕಲಾಲ್ ಬಜರಂಗಿ ಎಂಬುವರ ಹೆಸರನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಧವನ್ ಪ್ರಸ್ತಾಪಿಸಿದ್ದಾರೆ. ಹಿರಿಯ ವಕೀಲ ರಾಜೀವ್ ಧವನ್ ಅವರಿಗೆ ಬಂದಿರುವ ಬೆದರಿಕೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಸಾರಥ್ಯದ ಪಂಚ ಸದಸ್ಯ ಪೀಠ, ಧವನ್ ಅವರಿಗೆ ಬಂದಿರುವ ಬೆದರಿಕೆ ಕರೆಯ ಅರ್ಜಿ ವಿಚಾರಣೆಯನ್ನೂ ನಡೆಸುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/2LoJK9t

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...