ಬೈಲಹೊಂಗಲ(): ತಾಲ್ಲೂಕಿನ ತುರಮರಿ ಗ್ರಾಮದ ಗೃಹಿಣಿ ರಾಜಶ್ರೀ ಬಸವರಾಜ ಹದ್ದನ್ನವರ (26) ಮೂಗಿನಲ್ಲಿ ಮಾಂಸ ಬೆಳೆದಿದ್ದಕ್ಕೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ವೈದ್ಯರು ಮೂಗಿನಲ್ಲಿ ಬೆಳೆದಿರುವ ಮಾಂಸ ತೆಗೆಯಲು ಆಪರೇಷನ್ ಮಾಡುವ ಸಲುವಾಗಿ ಚಿಕಿತ್ಸಾ ಘಟಕಕ್ಕೆ ಸೇರಿಸಿದ್ದರು. ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದ ಗೃಹಿಣಿ ಸಾವಿಗೀಡಾಗಿದ್ದಾರೆ ಎಂದು ಮೃತ ಪತಿ, ತಂದೆ, ತಾಯಿ, ಕುಟುಂಬಸ್ಥರು ಆರೋಪಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರು ಆಸ್ಪತ್ರೆ ಆವರಣದಿಂದ ಪಾರಾಗಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಮೃತ ಗೃಹಿಣಿ ಕುಟುಂಬಸ್ಥರು ಆಕ್ರಂದಿಸುತ್ತಿದ್ದಾರೆ.. ಮೃತ ಗೃಹಿಣಿಗೆ ಒಂದೂವರೆ ವರ್ಷದ ಗಂಡು ಮಗುವಿದೆ.
from India & World News in Kannada | VK Polls https://ift.tt/2lcxWy5