ಮಹೇಂದ್ರ ಸಿಂಗ್ ಧೋನಿ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಯುವರಾಜ್ ಸಿಂಗ್

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ , ನಿವೃತ್ತಿ ವಿಚಾರದಲ್ಲಿ ಚರ್ಚೆಗಳು ಸಕ್ರಿಯವಾಗಿದೆ. ಏಕದಿನ ವಿಶ್ವಕಪ್ ಬಳಿಕ ವಿಶ್ರಾಂತಿ ತೆಗೆದುಕೊಂಡಿರುವ ಧೋನಿ, ಕ್ರಿಕೆಟೇತರ ಚುಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ನಿರ್ವಹಿಸಿರುವ ಮಹಿ, ಕಾಶ್ಮೀರದಲ್ಲಿ ದೇಶ ಸೇವೆ ಸಲ್ಲಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ನವೆಂಬರ್ ವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವುಳಿಯಲಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿ ಅವರ ವಿಶ್ವಕಪ್ ವಿಜೇತ ತಂಡದ ಸಹ ಆಟಗಾರನಾಗಿರುವ ಮಾಜಿ ಆಲ್‌ರೌಂಡರ್ , ಮಹಿ ನಿವೃತ್ತಿ ಬಗ್ಗೆ ಚರ್ಚೆಗಳು ಉಚಿತವಲ್ಲ ಎಂದು ಹೇಳಿದರು. ಭಾರತೀಯ ಕ್ರಿಕೆಟ್‌ಗಾಗಿ ಧೋನಿ ಅಪಾರ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ಭಾರತದ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಹಾಗಾಗಿ ಅವರದ್ದೇ ಆದ ಸಮಯವನ್ನು ನೀಡಬೇಕು. ನಿವೃತ್ತಿ ಬಗೆಗಿನ ಚರ್ಚೆಗಳು ಉಚಿತವಲ್ಲ ಎಂದು ಹೇಳಿದರು. ಯಾವಾಗ ಬಿಟ್ಟು ತೆರಳಬೇಕು ಎಂಬುದನ್ನು ಧೋನಿಯೇ ನಿರ್ಧರಿಸುತ್ತಾರೆ. ಈ ಬಗ್ಗೆ ಧೋನಿಯೇ ಅಂತಿಮ ಕರೆ ನೀಡಲಿದ್ದಾರೆ. ಇನ್ನೂ ಆಡಲು ಬಯಸಿದರೆ ಅದವರ ಇಚ್ಛೆಯಾಗಿದ್ದು, ನಾವದನ್ನು ಗೌರವಿಸಬೇಕು ಎಂದು ಯುವಿ ಸೇರಿಸಿದರು. ಅದೇ ಹೊತ್ತಿಗೆ 38ರ ಹರೆಯದ ಧೋನಿ ಸ್ಥಾನವನ್ನು ತುಂಬುವುದು ಕಷ್ಟಕರ ಎಂದು ಯುವಿ ಸೇರಿಸಿದರು. ಹಾಗಾಗಿ ಧೋನಿ ಜತೆಗೆ ಯುವ ಆಟಗಾರ ರಿಷಬ್ ಪಂತ್ ಹೋಲಿಕೆ ಮಾಡುವುದು ಸಮಂಜಸವಲ್ಲ ಎಂದರು. ರಿಷಬ್ ಪಂತ್‌ರನ್ನು ಧೋನಿ ಜತೆಗೆ ಹೋಲಿಕೆ ಮಾಡುವುದು ಉಚಿತವಲ್ಲ. ತುಂಬಾ ವರ್ಷಗಳ ಬಳಿಕ ಅವರು ಮಹೇಂದ್ರ ಸಿಂಗ್ ಧೋನಿ ಆಗಿದ್ದಾರೆ. ಹಾಗಾಗಿ ಅವರ ಹತ್ತಿರಕ್ಕೆ ತಲುಪಲು ರಿಷಬ್ ಪಂತ್‌‌ಗೆ ಸಾಕಷ್ಟು ವರ್ಷಗಳು ಬೇಕಾಗಿದೆ. ಹಾಗಾಗಿ ಧೋನಿ ಸ್ಥಾನವನ್ನು ತುಂಬಲು ತುಂಬಾನೇ ಸಮಯ ಬೇಕಾದಿತು ಎಂದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2mzOal2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...