Karnataka Weather Report - ಈ ಬಾರಿ ರಾಜ್ಯದಲ್ಲಿ ದಾಖಲೆಯ ಮಳೆಯಾಗಿದೆ. ಇದರಿಂದ ಎಲ್ಲ ನದಿ, ಕೆರೆ ಕಟ್ಟೆಗಳು ಭರ್ತಿಯಾಗಿವೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಷ್ಟೇ ಅಲ್ಲದೆ ನಗರ ಪ್ರದೇಶದಲ್ಲೂ ಚಳಿ ಹೆಚ್ಚಿದೆ. ಇದರಿಂದ ಜನರು ಬಹುಬೇಗನೆ ಮನೆ ಸೇರುವಂತಾಗಿದೆ. ಸೂರ್ಯೋದಯ ಆದರೂ ಚಳಿಯ ಅನುಭವ ಹೆಚ್ಚಾಗಿದೆ. ಬಾದಾಮಿಯಲ್ಲೂ ಚಳಿ ಹೆಚ್ಚಾಗಿದ್ದು, ಬೆಳಗ್ಗೆ ಎದ್ದು ದಿನನಿತ್ಯಗಳಲ್ಲಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ ಜನರು, ತಡವಾಗಿ ಏಳಲು ಶುರು ಮಾಡಿದ್ದಾರೆ. ಬೆಳಗ್ಗೆ ವಾಕಿಂಗ್ ಹೋಗುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಚಳಿ ಇರುವ ವೇಳೆಗಳಲ್ಲಿ ಜನರ ಓಡಾಟವೂ ಕಡಿಮೆಯಾಗಿದೆ.
from India & World News in Kannada | VK Polls https://ift.tt/SdnK31F