ಕ್ಷೇತ್ರ ಪುನರ್ವಿಂಗಡನೆಗೂ ಮೊದಲು ಸಾಧಾರಣ ಕ್ಷೇತ್ರದಂತಿದ್ದ ನಾಗಮಂಗಲ 2008ರ ಚುನಾವಣೆಯಲ್ಲಿ ಸಂಪೂರ್ಣ ಬದಲಾಯಿತು. ಬರದ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಹಣದ ಹೊಳೆ ಹರಿದು 36 ವರ್ಷಗಳ ಬಳಿಕ ಕಾಂಗ್ರೆಸ್ ಜಯ ಗಳಿಸಿತ್ತು. ಆಗ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಸುರೇಶ್ಗೌಡ ಸಚಿವರಾಗಿದ್ದ ಚೆಲುವರಾಯಸ್ವಾಮಿಯವರಿಗೆ ಸೋಲಿನ ರುಚಿ ತೋರಿಸಿದ್ದರು. ಹಾಗಾಗಿ ಹಳೆಯ ವೈರತ್ವ ವರ್ಷಗಳು ಕಳೆದಂತೆ ತೀವ್ರಗೊಂಡಿದ್ದು ಈ ಬಾರಿಯ ಚುನಾವಣೆಯಲ್ಲೂ ತಾರಕಕ್ಕೇರುವ ಲಕ್ಷಣ ಕಾಣುತ್ತಿದೆ.
from India & World News in Kannada | VK Polls https://ift.tt/h7V8q2B