ವಸಾಯಿ ರೋಡ್ ನಿಲ್ದಾಣದಿಂದ ಕಣ್ಣೂರಿಗೆ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಎ-2 (12432) ಎ.ಸಿ.ಕೋಚ್ನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ನಾಲ್ಕು ಹಾವಿನ ಮರಿಗಳನ್ನು ತರಲಾಗಿತ್ತು. ರೈಲಿನ ಬೆಡ್ರೋಲ್ ಉದ್ಯೋಗಿ ಕಮಲ್ಕಾಂತ್ ಶರ್ಮಾ ಅವರು ಎಂ. ಮುಹಮ್ಮದ್ ಇಶಾಮ್ ಪರವಾಗಿ ದಂಡ ಪಾವತಿಸಿದ ಹಿನ್ನೆಲೆಯಲ್ಲಿ ಹಾವಿನ ಮರಿಗಳನ್ನು ಮಹಮ್ಮದ್ ಇಶಾಮ್ಗೆ ಬಿಟ್ಟು ಕೊಡಲಾಗಿದೆ.
from India & World News in Kannada | VK Polls https://ift.tt/CtU8NqP
Dasara | ಉಚ್ಚಿಲ ದಸರಾ ಉತ್ಸವಕ್ಕೆ ಸಚಿವ ಸುನಿಲ್ ಕುಮಾರ್ ಭೇಟಿ: ಸರಕಾರದಿಂದ 25 ಲಕ್ಷ ರೂ. ಘೋಷಣೆ
ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ಉಚ್ಚಿಲ ದಸರಾ ಉತ್ಸವ-2022ಕ್ಕೆ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 25 ಲಕ್ಷ ರೂ. ಅನುದಾನವನ್ನು ಸಚಿವ ಸುನಿಲ್ ಕುಮಾರ್ ದೇವಳದಲ್ಲಿ ಘೋಷಣೆ ಮಾಡಿದರು. ಸಂಘದ ಮನವಿಗೆ ಸ್ಪಂದಿಸಿ 25 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಸಿಎಂ ಬಸವರಾಜ ಬೊಮ್ಮಾಯಿಗೆ ಸಮಸ್ತ ಮೊಗವೀರ ಸಮಾಜದ ಪರವಾಗಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಕೃತಜ್ಞತೆಗಳನ್ನು ಸಲ್ಲಿಸಿದರು.
from India & World News in Kannada | VK Polls https://ift.tt/IDFGym7
from India & World News in Kannada | VK Polls https://ift.tt/IDFGym7
ಕನ್ನಡ ಭಾಷಾ ವಿಧೇಯಕ ಡಿಸೆಂಬರ್ ಅಧಿವೇಶನದಲ್ಲಿ ಮಂಡನೆ: ಸಚಿವ ಸುನಿಲ್ ಕುಮಾರ್
V Sunil Kumar: ಉಡುಪಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆದಿ ಉಡುಪಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಉಡುಪಿ ಜಿಲ್ಲಾರಂಗ ಮಂದಿರ ನಿರ್ಮಾಣ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಸಚಿವ ಸುನಿಲ್ ಕುಮಾರ್ ಅವರು ಮಾತನಾಡಿದರು. ಕನ್ನಡಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ರೂಪಿಸಿದ ವಿಧೇಯಕವನ್ನು (Kannada Language Comprehensive Development Bill) ಈಗಾಗಲೇ ವಿಧಾನಸಭೆಯಲ್ಲಿ ಮಂಡಿಸಿದ್ದು, ಎರಡು ತಿಂಗಳ ಕಾಲ ಜನರಿಂದ ಆಕ್ಷೇಪ, ಸಲಹೆ, ಸೂಚನೆ ಆಹ್ವಾನಿಸಿ ಚರ್ಚಿಸಲಾಗುವುದು ಎಂದರು.
from India & World News in Kannada | VK Polls https://ift.tt/1nDAHLI
from India & World News in Kannada | VK Polls https://ift.tt/1nDAHLI
Devanahalli | ದೇವನಹಳ್ಳಿ ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿ: ಶಾಸಕ ನಿಸರ್ಗ ನಾರಾಯಣಸ್ವಾಮಿ
Nisarga Narayanaswamy: ದೇವನಹಳ್ಳಿ (Devanahalli) ತಾಲೂಕು ಗಂಗವಾರ ಜಯರಾಮೇಗೌಡ ನಿವಾಸದಲ್ಲಿ ಚನ್ನರಾಯಪಟ್ಟಣ ಹೋಬಳಿ ಮಟ್ಟದ ಜೆಡಿಎಸ್ (JDS) ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು ಹೊಸದಾಗಿ ದೇವನಹಳ್ಳಿ ತಾಲೂಕಿಗೆ ಬಂದಾಗ ನನಗೆ ರಾಜಕೀಯ ಅನುಭವ ಕೊರತೆಯಿತ್ತು. ತಾಲೂಕಿನ ಜನತೆ 17 ಸಾವಿರಕ್ಕೂ ಹೆಚ್ಚು ಮತ ನೀಡಿ ನನ್ನನ್ನು ಜಯಶೀಲರನ್ನಾಗಿ ಮಾಡಿ ತಾಲೂಕಿನ ಅಭಿವೃದ್ಧಿ ಮಾಡುವುದಕ್ಕೆ ಆಯ್ಕೆ ಮಾಡಿದ್ದಾರೆ. ನಾವೆಲ್ಲಾ ಜೆಡಿಎಸ್ ಕುಟುಂಬದ ಅಣ್ಣತಮ್ಮಂದಿರಂತೆ, ಗೊಂದಲಗಳಿದ್ದರೆ ನಿವಾರಣೆ ಮಾಡಿಕೊಳ್ಳಬೇಕು.
from India & World News in Kannada | VK Polls https://ift.tt/lEyPCh6
from India & World News in Kannada | VK Polls https://ift.tt/lEyPCh6
Vijayanagara | ನನಗೆ ಶಕ್ತಿ ಇರುವವರೆಗೆ ವಿಜಯನಗರದ ರಕ್ಷಕನಾಗಿ ಸೇವೆ: ಆನಂದ್ ಸಿಂಗ್ ಘೋಷಣೆ
Minister Anand singh: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ನಗರಸಭೆ ಹೊಸಪೇಟೆ ಆಶ್ರಯದಲ್ಲಿ ವಿಜಯ ನಗರ ಜಿಲ್ಲೆ ರಚನೆಯಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಸಂಡೂರು ರಸ್ತೆಯ ನಂದಿನಿ ಕಲ್ಯಾಣ ಮಂಟಪದಲ್ಲಿ ನಡೆದ 'ವಿಜಯನಗರ ಅಭ್ಯುದಯ ಕಾರ್ಯಕ್ರಮ' ಉದ್ಘಾಟಿಸಿ ಭಾನುವಾರ ಸಂಜೆ ಆನಂದ್ ಸಿಂಗ್ ಮಾತನಾಡಿದರು. ವಿಜಯನಗರ ಕ್ಷೇತ್ರದ ಜನರ ಗೌರವಕ್ಕೆ ಧಕ್ಕೆ ಬರುವಂತೆ ಎಂದಿಗೂ ನಡೆದುಕೊಂಡಿಲ್ಲ. ನನ್ನಿಂದ ಕ್ಷೇತ್ರಕ್ಕೆ ಕಪ್ಪು ಚುಕ್ಕೆ ಬರಲ್ಲ. ನನ್ನಿಂದ ಕೆಲಸ ಆಗಿದೆ ಎನ್ನುವ ಹೆಮ್ಮೆ ಇದೆ.
from India & World News in Kannada | VK Polls https://ift.tt/0mvsHEc
from India & World News in Kannada | VK Polls https://ift.tt/0mvsHEc
ಸಂಚಾರಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಯುವಕರನ್ನು ಆರೋಪ ಮುಕ್ತಗೊಳಿಸಿದ ಹೈಕೋರ್ಟ್
ಪ್ರಕರಣದ ಆರೋಪ ಪಟ್ಟಿಯ ಪ್ರಕಾರ, ಕುಡಿದು ವಾಹನ ಚಲಾಯಿಸುತ್ತಿದ್ದ ಆರೋಪಿಗಳನ್ನು ತಡೆದು ಪ್ರಶ್ನಿಸಿದಾಗ ಅವರು ತಮ್ಮ ಮೇಲೆ ಹಲ್ಲೆ ನಡೆಸಿದರು. ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲ ಸಾರ್ವಜನಿಕರು ಆರೋಪಿಗಳನ್ನು ವಶಕ್ಕೆ ಪಡೆಯಲು ಸಹಾಯ ಮಾಡಿದರೆಂದು ಎಚ್ಎಎಲ್ ಟ್ರಾಫಿಕ್ ಇನ್ಸ್ಪೆಕ್ಟರ್ ದೂರಿನಲ್ಲಿ ಹೇಳಲಾಗಿದೆ. ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು ಪ್ರತ್ಯಕ್ಷದರ್ಶಿಗಳಾಗಿದ್ದಾರೆ. ಆದರೆ, ಸ್ಥಳದಲ್ಲಿದ್ದ ಸಾರ್ವಜನಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
from India & World News in Kannada | VK Polls https://ift.tt/cPfTEgD
from India & World News in Kannada | VK Polls https://ift.tt/cPfTEgD
ಬಿಬಿಎಂಪಿ ಎಲೆಕ್ಷನ್ ಡಿಸೆಂಬರ್ನೊಳಗೆ ನಡೆಸಲು ಹೈಕೋರ್ಟ್ ಆದೇಶ: ಚುನಾವಣೆ ಮುಂದೂಡಲು ಸರ್ಕಾರದ ತಂತ್ರ
ಚುನಾವಣಾ ವಿವಾದದ ಚೆಂಡು ಸುಪ್ರೀಂಕೋರ್ಟ್ ಅಂಗಳದಿಂದ ಹೈಕೋರ್ಟ್ನಲ್ಲಿ ಬಿದ್ದಿತ್ತು. ಬಿಬಿಎಂಪಿ ವಾರ್ಡ್ವಾರು ಮೀಸಲು ನಿಗದಿಯಲ್ಲಿ ತಾರತಮ್ಯವಾಗಿದೆ ಎಂದು ಆಕ್ಷೇಪಿಸಿ ಈಜಿಪುರದ ಕೆ.ಮಹದೇವ, ಕಮ್ಮನಹಳ್ಳಿಯ ಪಳನಿ ದಯಾಳನ್, ದೊಡ್ಡಬಾಣಸವಾಡಿಯ ವಿ.ಶ್ರೀನಿವಾಸ್, ನಾಗನಾಥಪುರದ ಕೆ.ಚಂದ್ರಶೇಖರ್ ಸೇರಿ 8 ಮಂದಿ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿ ವಿಲೇವಾರಿ ಮಾಡಿತು.
from India & World News in Kannada | VK Polls https://ift.tt/uhl3HTE
from India & World News in Kannada | VK Polls https://ift.tt/uhl3HTE
Subscribe to:
Posts (Atom)
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನ...
-
ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಈ ಕ್ಷಣದ ಅನಿವಾರ್ಯತೆ. ಹೀಗಾಗಿ, ಹಲವು ಸಭೆ, ಸಮಾರಂಭಗಳೇ ...
-
ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಮತ್ತಿತರ ಹೂವು ಖರೀದಿ ಕೇಂದ್ರಗಳು ಹಾಗೂ ಇಲ್ಲಿನ ಬೃಹತ್ ಮಾರುಕಟ್ಟೆ ವ್ಯವಸ್ಥೆಯೂ ಬೆಂಗಳೂರು ಸುತ್ತಮುತ್ತ ಹೂ...
-
ಭವಿಷ್ಯದಲ್ಲಿ ಅರ್ಜುನ್ಗೆ ಭಾರತ ತಂಡದ ಬಾಗಿಲು ತೆರೆಯಬಹುದೇ? from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vi...
-
- ರಮೇಶ್ ಕುಮಾರ್ ನಾಯಕ್ ಅಂದು ಸಂಜೆ, ಅಮ್ಮಾ ಎರಡೇ ಗಂಟೆಯೊಳಗೆ ವಾಪಸ್ ಬರುತ್ತೇನೆ ಎಂದು ಮನೆಯ ಹೊಸ್ತಿಲು ದಾಟಿ ಹೋಗಿದ್ದಳು ಮಗಳು. ರಾತ್ರಿ ಗಂಟೆ ಎಂಟಾದರೂ ಬಾರ...