ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಸದ್ಯಕ್ಕೆ ಹೊರಡಿಸಲ್ಲ: ಮೋದಿ

ಆಯೋಧ್ಯೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಅಂತಿಮ ಹಂತದಲ್ಲಿದೆ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಳ್ಳುವ ವರೆಗೆ ಅಂತಹ ನಿರ್ಣಯ ಕೈಗೊಳ್ಳುವುದಿಲ್ಲ. ಅದಾದ ಬಳಿಕ ಕೇಂದ್ರ ಸರಕಾರ ಈ ವಿಚಾರದಲ್ಲಿ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಲಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

from India & World News in Kannada | VK Polls http://bit.ly/2EZ77pj

ಮನೆ ದೇವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸುದೀಪ್‌

ಹೊಸ ವರ್ಷಕ್ಕೂ ಮುನ್ನ ಕಿಚ್ಚ ಸುದೀಪ್‌ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿದ್ದಾರೆ. ಹೊಸ ವರ್ಷದಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅವೆಲ್ಲವೂ ಉತ್ತಮ ರೀತಿಯಲ್ಲಿ ಸಾಗಲಿ ಎಂಬ ಕಾರಣಕ್ಕಾಗಿ ಮನೆ ದೇವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದೇವೆ. ತಿಮ್ಮಪ್ಪನ ದರ್ಶನ ನನಗೆ ಯಾವತ್ತಿಗೂ ಖುಷಿ ಕೊಡುತ್ತದೆ. ಹಾಗಾಗಿ ಆಗಾಗ್ಗೆ ಇಲ್ಲಿಗೆ ಬರುತ್ತಲೇ ಇರುತ್ತೇನೆ. 2018 ಒಳ್ಳೆಯ ರೀತಿಯಲ್ಲೇ ಇತ್ತು. ಮುಂದಿನ ವರ್ಷ ಕೂಡ ಇದೇ ರೀತಿಯಲ್ಲಿ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ಎಲ್ಲರಿಗೂ ಕೂಡ ಈ ಸಂದರ್ಭದಲ್ಲಿ ಹೊಸ ವರ್ಷದ ಶುಭಾಶಯಗಳು' ಎಂದಿದ್ದಾರೆ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2F194kd

ಹೊಸ ವರ್ಷಕ್ಕೆ ಸ್ಯಾಂಡಲ್‌ವುಡ್‌ ಆಶಯಗಳು

2018ಕ್ಕೆ ವಿದಾಯ ಹೇಳಿರುವ ಸ್ಯಾಂಡಲ್‌ವುಡ್‌ ಹೊಸ ವರ್ಷ 2019 ಅನ್ನು ನೂರೆಂಟು ನಿರೀಕ್ಷೆ, ಕನಸು ಮತ್ತು ಆಶಯಗಳೊಂದಿಗೆ ಸ್ವಾಗತಿಸುತ್ತಿದೆ. ಕೆಜಿಎಫ್‌ ಸಿನಿಮಾ ಮೂಲಕ ಕನ್ನಡ ಸಿನಿಮಾದ ಮಾರುಕಟ್ಟೆ ದೊಡ್ಡದಾಗಿದೆ. ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಕನ್ನಡ ಸಿನಿಮಾವೊಂದಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಈಗ ಅದರಿಂದ 2019ರಲ್ಲಿ ಬಿಡುಗಡೆಯಾಗುವ ಸಿನಿಮಾಗಳಿಗೂ ಸಹಾಯ ಆಗುತ್ತದೆ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2F0Gi3Z

ತುಂಬು ಜೀವನ ನಡೆಸಿ ಹೊರಟ ಉಪ್ಪಿನಕಾಯಿ ಅಂಕಲ್‌: ರಮೇಶ್ ಭಟ್ ನುಡಿ ನಮನ

ತೊಂಬತ್ತು ದಶಕಗಳ ಪೂರ್ಣ ಜೀವನ ಅನುಭವಿಸಿದವರು ಕನ್ನಡದ ಹಿರಿಯ ನಟ ಅಂಕಲ್‌ ಲೋಕನಾಥ್‌. ಉಪ್ಪಿನ ಕಾಯಿ ಅಂಕಲ್‌ ಎಂದೇ ಫೇಮಸ್‌ ಆಗಿದ್ದ ಇವರು ಸೋಮವಾರ (ಡಿ.31) ಅಗಲಿದ್ದಾರೆ. ದೂರವಾದ ಚೇತನ ಕುರಿತಾಗಿ ಹಿರಿಯ ನಟ ರಮೇಶ್‌ ಭಟ್‌ ಅಕ್ಷರ ನಮನ ಸಲ್ಲಿಸಿದ್ದಾರೆ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2F191F3

ನ್ಯೂ ಯಿಯರ್‌ಗೆ ಜನ್ಯ ಹುಡ್ಗರಿಂದ ಪಾರ್ಟಿ ಹಾಡು

2018ರ ನಂ 1 ಮ್ಯೂಸಿಕ್‌ ಡೈರೆಕ್ಟರ್‌ ಅರ್ಜುನ್‌ ಜನ್ಯ ಟೀಮ್‌ನಿಂದ ಹೊಸ ವರ್ಷಕ್ಕೆ ಪಾರ್ಟಿ ಹಾಡೊಂದು ತಯಾರಾಗಿದೆ. ಪ್ರಜ್ವಲ್‌ ಎಂಬ ಯುವಕ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ಸುನೀಲ್‌ ಮತ್ತು ಶ್ರೀರಾಜ್‌ ಹಾಡಿದ್ದಾರೆ. ಇದು ಕಂಪ್ಲೀಟ್‌ ಪಾರ್ಟಿ ಸಾಂಗ್‌ ಆಗಿದ್ದು, ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಎನ್ನಿಸುವಂತಿದೆ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2F1aDQg

ಪೇಯ್ನ್ ಮಗುವನ್ನು ಮುದ್ದಾಡಿದ ಪಂತ್!

ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಮಗುವನ್ನು ಮುದ್ದಾಡುವ ಮೂಲಕ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಗಮನ ಸೆಳೆದಿದ್ದಾರೆ. ಈ ಮೊದಲು ತೃತೀಯ ಟೆಸ್ಟ್ ಪಂದ್ಯದ ವೇಳೆ ಇವರಿಬ್ಬರ ನಡುವೆ ವಾಗ್ವಾದ ನಡೆದಿತ್ತು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2EXykrA

ಬುಮ್ರಾಗೆ ಶ್ರೇಯಸ್ಸು ನೀಡಿದ ಮಾಜಿ ದಿಗ್ಗಜ ಕಪಿಲ್

ಟೀಮ್ ಇಂಡಿಯಾ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ ವಿಶಿಷ್ಟ ಬೌಲರ್ ಎಂದು ಮಾಜಿ ನಾಯಕ ಕಪಿಲ್ ದೇವ್ ಕೊಂಡಾಡಿದ್ದಾರೆ. ಅಲ್ಲದೆ ಬುಮ್ರಾ ಬಗ್ಗೆ ತಮ್ಮ ಅಂದಾಜುಗಳನ್ನೆಲ್ಲ ತಪ್ಪು ಎಂದು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2Qf97Lb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...