IND vs SA: 'ಹರ್ಷಲ್‌ ಪಟೇಲ್‌ ಮಾನಸಿಕ ಬಲಿಷ್ಠ ಕ್ರಿಕೆಟಿಗ': ಆರ್‌ಸಿಬಿ ವೇಗಿಗೆ ರಾಹುಲ್‌ ದ್ರಾವಿಡ್‌ ಬೆಂಬಲ!

Rahul Dravid backs Harshal Patel: ಹರ್ಷಲ್‌ ಪಟೇಲ್‌ ಈಗಷ್ಟೇ ಗಾಯದಿಂದ ಕಮ್‌ಬ್ಯಾಕ್‌ ಮಾಡಿದ್ದಾರೆ. ಹಾಗಾಗಿ ಅವರು ಪೂರ್ಣ ಪ್ರಮಾಣದಲ್ಲಿ ತಮ್ಮ ಕೌಶಲವನ್ನು ಅಳವಡಿಸಿಕೊಳ್ಳಲು ಇನ್ನಷ್ಟು ದಿನಗಳು ತೆಗೆದುಕೊಳ್ಳಬಹುದು ಎಂದು ಹೇಳುವ ಮೂಲಕ ಟೀಮ್ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಆರ್‌ಸಿಬಿ ವೇಗಿಯನ್ನು ಬೆಂಬಲಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್‌ ಟಿ20 ಪಂದ್ಯದಲ್ಲಿ ಹಾಗೂ ತಿರುವನಂತಪುರಂನಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಹರ್ಷಲ್‌ ಉತ್ತಮ ಪ್ರದರ್ಶನ ತೋರಿದ್ದಾರೆಂದು ಗುಣಗಾನ ಮಾಡಿದರು.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/E9WPyNm

Railway Station: ಬೆಂಗಳೂರಿನಲ್ಲಿ ರೈಲ್ವೆ ನಿಲ್ದಾಣಗಳಿಗೆ ಹೊಸ ಲುಕ್‌

ರೈಲು ನಿಲ್ದಾಣಗಳು ನಗರಗಳನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿದ್ದು, ದೇಶಾದ್ಯಂತ ಪ್ರಮುಖ ನಗರಗಳ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಬೆಂಗಳೂರು ನಗರದ ಹಾಗೆ ಬೇರೆ ನಗರಗಳ ರೈಲ್ವೆ ನಿಲ್ದಾಣಗಳನ್ನೂ ಅಭಿವೃದ್ಧಿ ಮಾಡಲಾಗುತ್ತಿದ್ದು, ಗುರುವಾರ (ಸೆ.29) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದಿಲ್ಲಿ, ಅಹಮದಾಬಾದ್‌ ಮತ್ತು ಮುಂಬಯಿನ ಶಿವಾಜಿ ಮಹಾರಾಜ್‌ ಟರ್ಮಿನಲ್‌ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ.

from India & World News in Kannada | VK Polls https://ift.tt/PUuYbCB

ಪಡಿತರಕ್ಕೆ ಗ್ರಾಹಕರ ಪರದಾಟ: ಒಂದರ ಬದಲು ಎರಡು ಒಟಿಪಿ; ಒನ್ ನೇಷನ್ ಒನ್ ರೇಷನ್ ಕಾರ್ಡ್‌ ಯೋಜನೆ ಪರಿಣಾಮ

ಹಿಂದೆ ಪಡಿತರ ಅಂಗಡಿಗಳಲ್ಲಿ ನಿಮಿಷಕ್ಕೆ ಒಂದು ಕಾರ್ಡ್‌, ಗಂಟೆಗೆ 40 ಕಾರ್ಡ್‌ ನಿರ್ವಹಣೆ ಆಗುತ್ತಿತ್ತು. ಈಗ ಒಂದು ಕಾರ್ಡ್‌ಗೆ 10ರಿಂದ 20 ನಿಮಿಷ ಬೇಕಾಗುತ್ತದೆ. ಸರ್ವರ್‌ ವಿಳಂಬ ಜತೆಗೆ ಕೆಲವು ಸಲ ಸರ್ವರ್‌ ಕೈಕೊಡುತ್ತಿರುವುದರಿಂದ ದಿನಕ್ಕೆ 40 ಕಾರ್ಡ್‌ ಕೂಡ ನಿರ್ವಹಣೆ ಆಗದ ದಿನಗಳಿವೆ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಸೆಪ್ಟೆಂಬರ್‌ವರೆಗೆ ಒಂದು ಬಾರಿ ಪಡಿತರ ಪಡೆಯಲು ಒಂದು ಸಲ ಮಾತ್ರ ಒಟಿಪಿ ನೀಡಬೇಕಾಗಿತ್ತು. ಈಗ ಕೇಂದ್ರದ ಪಾಲಿನ ಅಕ್ಕಿಗೆ, ರಾಜ್ಯದ ಪಾಲಿನ ಅಕ್ಕಿಗೆ ಎರಡು ಪ್ರತ್ಯೇಕ ಒಟಿಪಿ ಪಡೆಯಬೇಕಾಗಿದೆ.

from India & World News in Kannada | VK Polls https://ift.tt/aUTGego

ಗಾಂಧಿ ಜಯಂತಿ: ಬದನವಾಳು ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ

ನಂಜನಗೂಡಿನ ಬದನವಾಳು ಗ್ರಾಮೋದ್ಯಮ ಕೇಂದ್ರಕ್ಕೆ ರಾಹುಲ್ ಗಾಂಧಿ (Rahul Gandhi) ಭಾನುವಾರ ಭೇಟಿ ನೀಡಲಿದ್ದಾರೆ. ಬಳಿಕ ಖಾದಿ ಗ್ರಾಮೋದ್ಯೋಗದಲ್ಲಿ ತೊಡಗಿಸಿಕೊಂಡವರ ಜೊತೆಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 3:30 ರಿಂದ 3:45 ರವರೆಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಸಂಜೆ 4 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ‌.

from India & World News in Kannada | VK Polls https://ift.tt/KBLG9UQ

wildlife week: ಅ.2ರಿಂದ ವನ್ಯಜೀವಿ ಸಪ್ತಾಹ; ಮಾನವ-ವನ್ಯಜೀವಿಗಳ ಸಂಘರ್ಷಕ್ಕೆ ಪ್ರಾಕೃತಿಕ ಸಮತೋಲನದಿಂದ ಮುಕ್ತಿ

​ವನ್ಯಜೀವಿಗಳ ಸಂರಕ್ಷಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರಕಾರವು 'ಭಾರತೀಯ ವನ್ಯಜೀವಿ ಮಂಡಳಿ 'ಯನ್ನು ರಚಿಸಿದ್ದು, ಈ ಮೂಲಕ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ. (National Wildlife Week 2022) ಭಾರತವು ವೈವಿಧ್ಯಮಯ ವನ್ಯಜೀವಿಗಳಿಗೆ ನೆಲೆಯಾಗಿದ್ದು, ಉತ್ತರದಲ್ಲಿ ಹಿಮಾಲಯ, ದಕ್ಷಿಣದಲ್ಲಿ ನಿತ್ಯಹರಿದ್ವರ್ಣ ಮಳೆಕಾಡುಗಳು, ಪಶ್ಚಿಮದಲ್ಲಿ ಮರಳು ಜವುಗು ಮಿಶ್ರಣದೊಂದಿಗೆ ಕಾಂಡ್ಲಾವನಗಳು ಜೀವವೈವಿಧ್ಯತೆಯ 'ಹಾಟ್‌ಸ್ಪಾಟ್‌' ಎನಿಸಿದೆ.

from India & World News in Kannada | VK Polls https://ift.tt/dZtyezn

ಕಾನೂನಿಗೆ ಗೌರವಕೊಟ್ಟು ಧ್ವನಿವರ್ಧಕದಲ್ಲಿ ಅಜಾನ್‌ ಹೊರಡಿಸೋದನ್ನು ನಿಲ್ಲಿಸಬೇಕು: ಪ್ರಮೋದ್‌ ಮುತಾಲಿಕ್‌

ಕುಂದಾಪುರದ ವಠಾರದಲ್ಲಿನ ಮಸೀದಿಯೊಂದರಲ್ಲಿ ಸುಪ್ರೀಂಕೋರ್ಟ್‌ನ ಆದೇಶ ಪಾಲನೆಯಾಗುತ್ತಿಲ್ಲ. ಹಿಂದೂ ಹಬ್ಬಗಳಲ್ಲಿ ಡಿಜೆ ಹಾಕಿದರೆ ಕಷ್ಟ ಎನ್ನುವ ಅಧಿಕಾರಿಗಳು ಸುಪ್ರೀಂಕೋರ್ಟ್‌ನ ಆದೇಶ ಪಾಲಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಜಿಲ್ಲೆಯ ಎಸ್ಪಿ, ಡಿಸಿ ಅವರಿಗೆ ಆದೇಶ ಪಾಲಿಸಲು ಆಗದಿದ್ದಲ್ಲಿ ಶ್ರೀರಾಮ ಸೇನೆ ಮೈಕ್‌ ಕೀಳುವ ಅಭಿಯಾನ ನಡೆಸಲಿದೆ. ನಾವು ಪ್ರಾರ್ಥನೆಯ ವಿರೋಧಿಗಳಲ್ಲ. ಪ್ರಾರ್ಥನೆಯ ಹೆಸರಿನಲ್ಲಿ ಇನ್ನೊಬ್ಬರಿಗೆ ಕಿರಿಕಿರಿ ಉಂಟು ಮಾಡಲು ಬಿಡುವುದಿಲ್ಲ. ನೆಲದ ಕಾನೂನಿಗೆ ಗೌರವಕೊಟ್ಟು ಧ್ವನಿವರ್ಧಕ ಮೂಲಕ ಅಜಾನ್‌ ಹೊರಡಿಸುವುದನ್ನು ನಿಲ್ಲಿಸಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

from India & World News in Kannada | VK Polls https://ift.tt/9pquDx1

ಬಾಲಕರ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

ಆರೋಪಿಯ ವಿರುದ್ಧ ಸೈಬರ್‌ ಟಿಪ್‌ಲೈನ್‌ನಿಂದ ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆಗಿನ ತನಿಖಾಧಿಕಾರಿ ಸಿಇಎನ್‌ ಪಿಐ ಕೆ.ಟಿ ಗುರುರಾಜ್‌ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಸರಕಾರಿ ಅಭಿಯೋಜಕ ಹರಿಪ್ರಸಾದ್‌ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.

from India & World News in Kannada | VK Polls https://ift.tt/BzGiMmN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...