‘ಅಚ್ಛೇದಿನ್‌’ ಜಿಎಸ್‌ಟಿ ವಸೂಲಿಗಷ್ಟೇ ಸೀಮಿತವಾಗಿದೆ: ಕೇಂದ್ರದ ವಿರುದ್ಧ ಎಂಬಿ ಪಾಟೀಲ್ ಕಿಡಿನುಡಿ

ಪ್ರಚಾರ ಸಮಿತಿ ಅಧ್ಯಕ್ಷನಾದ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಕಾಂಗ್ರೆಸ್‌ನ ಸಾಧನೆ ಹಾಗೂ ಬಿಜೆಪಿಯ ವೈಫಲ್ಯಗಳನ್ನು ಎತ್ತಿಡಿಯುವ ಕಾರ್ಯದಲ್ಲಿ ತೊಡಗಿದ್ದೇನೆ. ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಸಚಿವರ ನಡುವೆಯೇ ಸಾಮರಸ್ಯ ಇಲ್ಲವಾಗಿದೆ. ಶೇ.40ರ ಕಮಿಷನ್‌ ಬಗ್ಗೆ ದೂರು ನೀಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ತಾಳಿದ್ದಾರೆ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಹರಿಹಾಯ್ದರು.

from India & World News in Kannada | VK Polls https://ift.tt/rFDMY7g

ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಬೆನ್ನಲ್ಲೇ ಸಿಎಂ, ನಳಿನ್‌ ಭೇಟಿಯಾಗಿ ಬಿಜೆಪಿ ಸೇರೋದಾಗಿ ಮುದ್ದಹನುಮೇಗೌಡ ಘೋಷಣೆ!

Mudda Hanume Gowda: ಕಾಂಗ್ರೆಸ್‌ಗೆ ರಾಜೀನಾಮೆ ‌ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿರುವ ಮುದ್ದ ಹನುಮೇಗೌಡ ತಾವು ಬಿಜೆಪಿ ಸೇರೋದಾಗಿ ಘೋಷಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಮುಖಂಡರ ಜತೆ ಮಾತನಾಡಿದ್ದೇನೆ. ಪಿತೃಪಕ್ಷ ಬರುವುದರೊಳಗೆ ಶೀಘ್ರದಲ್ಲೇ (ನಾಲ್ಕೈದು ದಿನದೊಳಗೆ) ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದೇನೆ ಎಂದಿದ್ದಾರೆ.

from India & World News in Kannada | VK Polls https://ift.tt/waKYWZ6

PM Mangaluru Visit | ಹೊಸ ಚರಿತ್ರೆ ಬರೆದ ಪ್ರಧಾನಿ ಸಮಾವೇಶ: 2 ಲಕ್ಷ ಅಭಿಮಾನಿಗಳಿಂದ ತುಂಬಿ ತುಳುಕಿದ ಮೈದಾನ

ರಾವಳಿಯ ರಾಜಕೀಯ ಸಮಾವೇಶಗಳ ಚರಿತ್ರೆಯಲ್ಲೇ ಹೊಸ ಮೈಲುಗಲ್ಲೊಂದು ಶುಕ್ರವಾರ ಸ್ಥಾಪನೆಯಾಗಿದೆ. ಕಡಲ ನಗರಿ ಮಂಗಳೂರಿನ ಕೂಳೂರು ಗೋಲ್ಡ್‌ ಫಿಂಚ್‌ ಸಿಟಿಯ 25 ಎಕರೆ ವಿಶಾಲ ಮೈದಾನ ಸುಮಾರು 2 ಲಕ್ಷ ಅಭಿಮಾನಿ ಸಾಗರವನ್ನು ಆಕ್ರಮಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಕರಾವಳಿಯ ಅನಘ್ರ್ಯ ಕಾಣಿಕೆ ಸಲ್ಲಿಕೆಯಾಗಿದೆ.

from India & World News in Kannada | VK Polls https://ift.tt/snZ7xqO

ಮಂಡ್ಯ ಜಿಲ್ಲಾ ‘ಕೈ’ ಮುಖಂಡರು-ಸಂಸದೆ ನಡುವೆ ಜಿದ್ದಾಜಿದ್ದಿ: ಸುಮಲತಾ ಕಾಂಗ್ರೆಸ್‌ ಸೇರ್ಪಡೆಗೆ ಪ್ರತಿಷ್ಠೆ ಅಡ್ಡಿ

ಜೆಡಿಎಸ್‌ ಭದ್ರಕೋಟೆಯಲ್ಲಿ ಪಕ್ಷದ ಬಲ ಹೆಚ್ಚಿಸಿಕೊಳ್ಳಲು ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಪಕ್ಷ ಸೇರ್ಪಡೆಯನ್ನು ಎಐಸಿಸಿ ಹೈಕಮಾಂಡ್‌ ಬಯಸಿದೆ. ಆದರೆ, ಸ್ಥಳೀಯ ನಾಯಕರ ಪ್ರತಿಷ್ಠೆ ಇದಕ್ಕೆ ಅಡ್ಡಿಯಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಭರ್ಜರಿ ಗೆಲುವಿನ ಹಿಂದೆ ತಮ್ಮ ಶ್ರಮವಿದೆ ಎಂಬ ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಮುಖಂಡರ ವಾದ ಹಾಗೂ ಹಾಲಿ ಸಂಸದರಾಗಿ ತಾವು ರಾಜ್ಯ ಮಟ್ಟದ ನಾಯಕಿ ಎಂಬ ಸುಮಲತಾ ಅವರ ಸ್ವಾಭಿಮಾನದ ತಿಕ್ಕಾಟ ನಡೆದಿದೆ.

from India & World News in Kannada | VK Polls https://ift.tt/xYoCATd

9 ದಶಕಗಳ ನಂತರ ಕೋಡಿ ಬಿದ್ದ ವಾಣಿ ವಿಲಾಸ ಸಾಗರ ಡ್ಯಾಂ, ಗಂಗಾ ಪೂಜೆ ನೇರವೇರಿಸಿದ ಶಾಸಕಿ

vani vilasa sagara dam: ಮಧ್ಯ ಕರ್ನಾಟಕದ ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಅಣೆಕಟ್ಟು ಗುರುವಾರ ಸಂಜೆ 7 ಗಂಟೆ ಸುಮಾರಿಗೆ 130 ಅಡಿ ನೀರಿನ ಮಟ್ಟ ತಲುಪಿದೆ. ಈ ಮೂಲಕ ಹಾರನಕಣಿವೆ ರಂಗನಾಥಸ್ವಾಮಿ ದೇವಸ್ಥಾನ ಸಮೀಪದ ಕೋಡಿ ಕಟ್ಟೆಯ ಭಾಗದಲ್ಲಿ ನೀರು ನಿಧನವಾಗಿ ಹರಿದು ಮಧ್ಯರಾತ್ರಿ ಸಂಪೂರ್ಣ ಕೋಡಿ ತುಂಬಿ ಹರಿದಿದೆ. ಶುಕ್ರವಾರ ಬೆಳಗ್ಗೆ ಹಿರಿಯೂರು-ಹೊಸದುರ್ಗ ರಸ್ತೆಯಲ್ಲಿ ನೀರು ಹರಿದಿದೆ.

from India & World News in Kannada | VK Polls https://ift.tt/DEgS4Ox

31 ಶಿಕ್ಷಕರಿಗೆ ರಾಜ್ಯಮಟ್ಟದ 'ಉತ್ತಮ ಶಿಕ್ಷಕ ಪ್ರಶಸ್ತಿ': ಶಿಕ್ಷಕಿಯರಿಗೆ 'ಮಾತೆ ಸಾವಿತ್ರಿ ಬಾಯಿ ಫುಲೆ' ಸಮ್ಮಾನ

ಶಿಕ್ಷಕಿಯರಿಗೆ 'ಮಾತೆ ಸಾವಿತ್ರಿಬಾಯಿ ಫುಲೆ' ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗಳನ್ನು ಸೆ.5ರಂದು ಶಿಕ್ಷಣ ಇಲಾಖೆಯು ನಡೆಸಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ, ಮುಖ್ಯ ಶಿಕ್ಷಕ ಹಾಗೂ ವಿಶೇಷ ಶಿಕ್ಷಕರಿಗೆ ತಲಾ 10 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ

from India & World News in Kannada | VK Polls https://ift.tt/97qlOpv

Teachers fight | ಚಿಕ್ಕೋಡಿಯಲ್ಲಿ ಸಾಕ್ಷಿಗಾಗಿ ಶಾಲಾ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದ ಶಿಕ್ಷಕಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಶಿಕ್ಷಕ ಆರ್.ಎನ್. ಮಡಿವಾಳರ ಹಾಗೂ ಶಿಕ್ಷಕಿ ಎಂ.ಕೆ ಜಂಬಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ಮಾರಾಮರಿ ನಡೆದು, ಹೊಡೆದಾಡಿಕೊಂಡಿದ್ದಾರೆ. ಗಲಾಟೆ ಮಾಡಿಕೊಂಡ ಇಬ್ಬರು ಶಿಕ್ಷಕರು ಪರಸ್ಪರ ಸಂಬಂಧಿಕರಾಗಿದ್ದಾರೆ. ಶಿಕ್ಷಕಿ ಎಂ.ಕೆ ಜಂಬಗಿ ಅವರ ಅಕ್ಕನ ಗಂಡನಾಗಿರುವ ಶಿಕ್ಷಕ ಆರ್.ಎನ್.ಮಡಿವಾಳರ ನಡುವೆ ಆಗಾಗ್ಗೆ ಮನೆಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ.

from India & World News in Kannada | VK Polls https://ift.tt/vrgbmqE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...