ರಾಜಧಾನಿಯತ್ತ 500 ಟ್ರ್ಯಾಕ್ಟರ್ ಗಳು: ರ‍್ಯಾಲಿಗೆ ರೈತರ ಕಾರ್ಯತಂತ್ರ, ತಡೆಗೆ ಪೊಲೀಸರ ಮರುತಂತ್ರ !

ಬೆಂಗಳೂರು: ಕೃಷಿ ತಿದ್ದುಪಡಿ ಕಾಯಿದೆಗಳ ರದ್ದತಿಗೆ ಒತ್ತಾಯಿಸಿ ''ಕ್ಕಾಗಿ ಸಾವಿರಾರು ರೈತರು ಮಂಗಳವಾರ ಉದ್ಯಾನ ನಗರಿಗೆ ಲಗ್ಗೆ ಹಾಕಲಿದ್ದು, ನಗರದಾದ್ಯಂತ ವಾಹನ ಸಂಚಾರದಲ್ಲಿ ಭಾರಿ ವ್ಯತ್ಯಯವಾಗುವ ನಿರೀಕ್ಷೆಯಿದೆ. ರೈತರು ನಗರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್‌, ಕಾರು, ಸ್ಕೂಟರ್‌ ಸೇರಿದಂತೆ ಇತರೆ 15 ಸಾವಿರಕ್ಕೂ ಹೆಚ್ಚು ವಾಹನಗಳ ಮೂಲಕ ಪರೇಡ್‌ ನಡೆಸಲಿದ್ದು, ರಾಜ್ಯಾದ್ಯಂತದ ಸುಮಾರು 25 ಸಾವಿರಕ್ಕೂ ಹೆಚ್ಚು ರೈತರು ಮತ್ತು ಕಾರ್ಮಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಗರ ಪೊಲೀಸ್‌ ಆಯುಕ್ತರು 125 ಟ್ರ್ಯಾಕ್ಟರ್‌ಗಳ ರ್ಯಾಲಿಗೆ ಅನುಮತಿ ನೀಡಿದ್ದಾರೆ. ಅಲ್ಲದೆ ಇತರ ವಾಹನಗಳ ಪರೇಡ್‌ಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ರೈತ ಗಣತಂತ್ರ ಪಥಸಂಚಲನಕ್ಕೆ ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಸೇರಿದಂತೆ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ರೈತರು ಭಾಗವಹಿಸಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಮೈಸೂರು ಮಾರ್ಗದಿಂದ ಬರುವ ರೈತರು ಬಿಡದಿ ಕೈಗಾರಿಕಾ ಜಂಕ್ಷನ್‌ನಲ್ಲಿ, ಉತ್ತರ ಕರ್ನಾಟಕದಿಂದ ಬರುವ ರೈತರು ತುಮಕೂರು-ನೈಸ್‌ರಸ್ತೆ ಜಂಕ್ಷನ್‌, ಚಿಕ್ಕಬಳ್ಳಾಪುರ ಕಡೆಯಿಂದ ಬರುವ ರೈತರು ದೇವನಹಳ್ಳಿ ನಂದಿ ಕ್ರಾಸ್‌ ಬಳಿ ಹಾಗೂ ಕೋಲಾರ ಕಡೆಯಿಂದ ಬರುವ ರೈತರು ಹೊಸಕೋಟೆ ಟೋಲ್‌ ಬಳಿ ಹಾಗೂ ಬೆಂಗಳೂರು ಸಿಟಿ ರೈಲ್ವೆ ಜಂಕ್ಷನ್‌ನಲ್ಲಿ ಬೆಳಗ್ಗೆ 9 ಗಂಟೆಗೆ ಸೇರಲಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ಮಾಗಡಿ ರಸ್ತೆಯ ಸುಮನಹಳ್ಳಿ ಗೇಟ್‌ನಿಂದ ಆರಂಭವಾಗಲಿದ್ದು, ನಾಯಂಡಹಳ್ಳಿ ಜಂಕ್ಷನ್‌, ಮೈಸೂರು ರಸ್ತೆ, ಟೌನ್‌ಹಾಲ್‌ ಹಾಗೂ ಎಸ್‌ಬಿಎಂ ವೃತ್ತದ ಮೂಲಕ ಸಾವಿರಾರು ರೈತರು ಪ್ರೀಡಂಪಾರ್ಕ್ ತಲುಪಲಿದ್ದಾರೆ. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ಸಾವಿರಾರು ರೈತರು ನೈಸ್‌ ಜಂಕ್ಷನ್‌ನಿಂದ ಹೊರಟು, ಮೈಸೂರು ರಸ್ತೆ ಮೂಲಕ ಫ್ರೀಡಂಪಾರ್ಕ್ ನಲ್ಲಿ ಸಂಗಮಗೊಳ್ಳಲಿದ್ದಾರೆ. ನಂತರ ಟ್ರ್ಯಾಕ್ಟರ್‌ ಸೇರಿದಂತೆ ಇತರೆ ವಾಹನಗಳೊಂದಿಗೆ ಪರೇಡ್‌ ಮೂಲಕ ಮಧ್ಯಾಹ್ನ 12.30ರ ವೇಳೆಗೆ ಫ್ರೀಡಂಪಾರ್ಕ್ ಗೆ ಆಗಮಿಸಲಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಕೃಷಿ ಕಾಯಿದೆಗಳ ವಾಪಸಾತಿಗೆ ಆಗ್ರಹಿಸಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಪ್ರಮುಖವಾಗಿ ಮೆಜೆಸ್ಟಿಕ್‌, ಶೇಷಾದ್ರಿ ರಸ್ತೆ, ಕೆ.ಆರ್‌.ವೃತ್ತ, ಕಾರ್ಪೊರೇಷನ್‌, ಕೆ.ಜಿ.ರಸ್ತೆ ಸೇರಿದಂತೆ ರ್ಯಾಲಿ ಬರುವ ಮಾರ್ಗಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುವ ನಿರೀಕ್ಷೆಯಿದೆ. ಪೊಲೀಸರ ಕಟ್ಟೆಚ್ಚರ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ರೈತರ ಪರೇಡ್‌ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದು, ವಾಹನ ದಟ್ಟಣೆ ಉಂಟಾಗದಂತೆ ತಡೆಯಲು ಸರ್ವ ಪ್ರಯತ್ನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ನಗರದ ನಾನಾ ಭಾಗಗಳಿಂದ ಫ್ರೀಡಂ ಪಾರ್ಕ್ ಗೆ ಬರುವ ರೈತರನ್ನು ನಿಗದಿತ ಮಾರ್ಗದಲ್ಲಿ ಸಂಚರಿಸುವಂತೆ ನೋಡಿಕೊಳ್ಳಬೇಕು ಎಂದು ಸೆಕ್ಟರ್‌ ಅಧಿಕಾರಿಗಳಿಗೆ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸೂಚಿಸಿದ್ದಾರೆ.
  • ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಕಡೆಯಿಂದ ಬರುವವರು, ಹೆಬ್ಬಾಳ ಮೇಲ್ಸೇತುವೆ ಬಳಿ ಬಲ ತಿರುವು ಪಡೆದು ಭದ್ರಪ್ಪ ಲೇಔಟ್‌, ಕುವೆಂಪು ವೃತ್ತ, ಬಿಇಎಲ್‌ ಸರ್ಕಲ್‌ ಸರ್ವೀಸ್ ರಸ್ತೆ , ಬಿಇಎಲ್‌ ರಸ್ತೆ ಗೌರಿ ಅಪಾರ್ಟ್‌ಮೆಂಟ್‌, ದೇವಸಂದ್ರ, ಐ.ಎಸ್‌.ಆರ್‌.ಓ., ಎಂ.ಎಸ್‌.ರಾಮಯ್ಯ ಜಂಕ್ಷನ್‌, ಸದಾಶಿವನಗರ ಪಿ.ಎಸ್‌.ಜಂಕ್ಷನ್‌, ಬಿಎಚ್‌ಇಎಲ್‌ ವೃತ್ತ, ಮಾರಮ್ಮ ವೃತ್ತ, ಬಲ ತಿರುವು ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್‌, 15ನೇ ಕ್ರಾಸ್‌, 1ನೇ ಕ್ರಾಸ್‌ , ಕೆ.ಸಿ.ಜನರಲ್‌ ಅಂಡರ್‌ಪಾಸ್‌, ಗೀತಾಂಜಲಿ ಜಂಕ್ಷನ್‌, ಲಿಂಕ್‌ ರಸ್ತೆ, ಆರ್‌.ಎಂ.ಎಸ್‌. ಶೇಷಾದ್ರಿಪುರಂ, ಆನಂದರಾವ್‌ ವೃತ್ತ , ಮೌರ್ಯ ಜಂಕ್ಷನ್‌ ಮೂಲಕ ಫ್ರೀಡಂ ಪಾರ್ಕ್ ತಲುಪಬೇಕು.
  • ಕೋಲಾರ, ಹೊಸಕೋಟೆ ಕಡೆಯಿಂದ ಬರುವವರು- ಮೇಡಪಳ್ಳಿ ಜಂಕ್ಷನ್‌, ಕೆ.ಆರ್‌.ಪುರ, ಟಿನ್‌ ಫ್ಯಾಕ್ಟರಿ, ಬಿಗ್‌ಬಜಾರ್‌, ಎನ್‌.ಜಿ.ಇ.ಎಫ್‌., 100 ಅಡಿ ರಸ್ತೆ ಜಂಕ್ಷನ್‌ , ಆಂಜನೇಯ ಸ್ವಾಮಿ ಟೆಂಪಲ್‌ ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, ರಾಮಯ್ಯ ಜಂಕ್ಷನ್‌, ಟ್ರನಿಟಿ ವೃತ್ತ ಎಡ ತಿರುವು, ರಿಚ್ಮಂಡ್‌ ರಸ್ತೆ, ಹಾಸ್ಮಧಿಟ್‌ ಜಂಕ್ಷನ್‌ ಬಲ ತಿರುವು, ಮದರ್‌ ತೆರೇಸಾ ಜಂಕ್ಷನ್‌, ಅಶೋಕನಗರ ಸಿಗ್ನಲ್‌ ಲೈಟ್‌ - ರಿಚ್ಮಂಡ್‌ ವೃತ್ತ - ಆರ್‌.ಆರ್‌.ಎಂ.ಆರ್‌, ಜಂಕ್ಷನ್‌ - ಹಡ್ಸನ್‌ ವೃತ್ತ - ಹಲಸೂರು ಗೇಟ್‌ ಪಿಎಸ್‌ , ಜಂಕ್ಷನ್‌ , ಕೆ.ಜಿ.ರಸ್ತೆ - ಮೈಸೂರು ಬ್ಯಾಂಕ್‌ ವೃತ್ತ- ಬಲ ತಿರುವು ಪ್ಯಾಲೇಸ್‌ ರಸ್ತೆ - ಮಹಾರಾಣಿ ಮೇಲುಸೇತುವೆ ಸರ್ವಿಸ್‌ ರಸ್ತೆ - ಎಡ ತಿರುವು - ಶೇಷಾದ್ರಿ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಸೇರಬೇಕು.
  • ವರ್ತೂರು ಮತ್ತು ಹಳೆ ಏರ್‌ಪೋರ್ಟ್‌ ರಸ್ತೆ ಕಡೆಯಿಂದ ಬರುವವರು ವರ್ತೂರು ರಸ್ತೆ, ಹಳೆ ಏರ್‌ಪೋರ್ಟ್‌ ರಸ್ತೆ, ದೊಮ್ಮಲೂರು ವೃತ್ತ, ಇಂಡಿಯಾ ಗ್ಯಾರೇಜ್‌, ಡಿಸೋಜಾ ವೃತ್ತ, ಮದರ್‌ ತೆರೇಸಾ ಜಂಕ್ಷನ್‌, ಅಶೋಕನಗರ ಸಿಗ್ನಲ್‌, ರಿಚ್ಮಂಡ್‌ ವೃತ್ತ. ಹಲಸೂರು ಗೇಟ್‌ ಜಂಕ್ಷನ್‌, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್‌ ವೃತ್ತದ ಬಳಿ ಬಲ ತಿರುವು ಶೇಷಾದ್ರಿ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಗೆ ಹೋಗಬೇಕು.
  • ಮೈಸೂರು ಸರ್ಜಾಪುರ ರಸ್ತೆ ಕಡೆಯಿಂದ ಬರುವವರು ಮಡಿವಾಳ, ಮಡಿವಾಳ ಚೆಕ್‌ ಪೋಸ್ಟ್‌, ತಾವರೆಕೆರೆ ಜಂಕ್ಷನ್‌, ಡೇರಿ ವೃತ್ತ, ನಿಮ್ಹಾನ್ಸ್‌, ಕೆ.ಎಚ್‌.ರಸ್ತೆ - ಕೆ.ಎಚ್‌.ಜಂಕ್ಷನ್‌, ಶಾಂತಿನಗರ ಬಿಎಂಟಿಸಿ ಜಂಕ್ಷನ್‌, ರಿಚ್ಮಂಡ್‌ ವೃತ್ತದ ಬಳಿ ಎಡ ತಿರುವು ಪಡೆದು, ಹಲಸೂರು ಗೇಟ್‌ ಜಂಕ್ಷನ್‌, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬಲ ತಿರುವು ಪಡೆದು ಫ್ರೀಡಂ ಪಾರ್ಕ್ ತಲುಪಬೇಕು.
  • ಬನ್ನೇರುಘಟ್ಟ ರಸ್ತೆ ಕಡೆಯಿಂದ ಬರುವವರು ಅರಕೆರೆ ಬಿಳೇಕಹಳ್ಳಿ ಜಂಕ್ಷನ್‌, ಜಯದೇವ ಅಂಡರ್‌ಪಾಸ್‌, ಡೇರಿ ವೃತ್ತದ ಬಳಿ ಎಡ ತಿರುವು ಪಡೆದು ನಿಮ್ಹಾನ್ಸ್‌, ಕೆ.ಎಚ್‌.ರಸ್ತೆ, ಶಾಂತಿನಗರ ಬಿಎಂಟಿಸಿ ಜಂಕ್ಷನ್‌, ರಿಚ್ಮಂಡ್‌ ವೃತ್ತದಲ್ಲಿ ಎಡ ತಿರುವು ಪಡೆದು, ಹಲಸೂರು ಗೇಟ್‌ ಜಂಕ್ಷನ್‌, ಮೈಸೂರು ಬ್ಯಾಂಕ್‌ ವೃತ್ತದ ಬಳಿ ಬಲ ತಿರುವು ಪಡೆದು, ಶೇಷಾದ್ರಿ ರಸ್ತೆ ಮೂಲಕ ಫ್ರೀಡಂಪಾರ್ಕ್ ಸೇರಬಹುದು.


from India & World News in Kannada | VK Polls https://ift.tt/36bSBqo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...